ಕಣಿಯೂರು ಶ್ರೀಗಳು ಅಯೋಧ್ಯ, ವಾರಣಾಸಿ ನಗರಕ್ಕೆ

0

ವಿಟ್ಲ: ಅಖಿಲ ಭಾರತೀಯ ಸಂತಸಮಿತಿಯ ಕರ್ನಾಟಕ ರಾಜ್ಯದ ಕೋಶಾಧಿಕಾರಿಯಾಗಿರುವ ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿಯವರು ಅಯೋಧ್ಯ, ವಾರಣಾಸಿ ಸಹಿತ ಇನ್ನಿತರ ಕಡೆಗಳಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಅ.30ರಿಂದ ನ.8ರ ವರೆಗೆ ಕ್ಷೇತ್ರದಲ್ಲಿ ಲಭ್ಯರಿರುವುದಿಲ್ಲ.

ಅಖಿಲ ಭಾರತೀಯ ಸಂತ‌ಸಮಿತಿ, ಅಖಿಲ ಭಾರತೀಯ ಅಖಾಡ ಪರಿಷತ್ ಮತ್ತು ಶ್ರೀ ಕಾಶಿ ವಿದ್ವತ್ ಪರಿಷತ್ ಹಾಗೂ ಗಂಗಾ ಮಹಾಸಭಾ ಇದರ ವತಿಯಿಂದ ನ.2 ರಿಂದ ನ.5ರ ವರೆಗೆವಾರಣಾಸಿ ಅಂತರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರದ ರುದ್ರಾಕ್ಷಿ ಸಭಾಂಗಣದಲ್ಲಿ ನಡೆಯಲಿರವ ‘ಸಂಸ್ಕೃತಿ ಸಂಸದ್-23’ ರಲ್ಲಿ ಭಾಗವಹಿಸಲಿದ್ದಾರೆ. ಉಳಿದಂತೆ ಅಯೋಧ್ಯ ಸಹಿತ ಕೆಲಾವೊಂದು ಧಾರ್ಮಿಕ ಕೇಂದ್ರ ಗಳಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಭಕ್ತರ ಭೇಟಿಗೆ ಲಭ್ಯರಿರುವುದಿಲ್ಲ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here