ಎಸ್‌ಕೆಎಸ್‌ಎಸ್‌ಎಫ್ ಕುಂತೂರು ಶಾಖೆ ದಶಮಾನೋತ್ಸವ-ಸ್ವಾಗತ ಸಮಿತಿ ರಚನೆ

0

ಪೆರಾಬೆ: ಎಸ್‌ಕೆಎಸ್‌ಎಸ್‌ಎಫ್ ಕುಂತೂರು ಶಾಖೆ ಇದರ ದಶ ವಾರ್ಷಿಕ ಸಮಾರಂಭದ ಪ್ರಯುಕ್ತ ನ.14ರಂದು ಏಕದಿನ ಪ್ರಭಾಷಣ ನಡೆಯಲಿದ್ದು ಇದರ ಸ್ವಾಗತ ಸಮಿತಿಯನ್ನು ಶಾಖೆಯ ಅಧ್ಯಕ್ಷರಾದ ಮುಹಮ್ಮದ್ ಅಲಿ ಕೋಚಕಟ್ಟೆಯವರ ನೇತೃತ್ವದಲ್ಲಿ ರಚಿಸಲಾಯಿತು.


ನೂತನ ಸಮಿತಿ ಚೆಯರ್‌ಮ್ಯಾನ್ ಆಗಿ ಬಶೀರ್ ಮಶ್ರೀಕ್, ವೈಸ್ ಚೆಯರ್‌ಮೆನ್ ಆಗಿ ಅನೀಸ್ ನೂಜಿಲ, ಕನ್ವಿನರ್ ಆಗಿ ಅಬ್ದುಲ್ಲಾ ಪಿ.ಎ.ಅಲ್‌ಕೌಸರ್, ವೈಸ್ ಕನ್ವಿನರ್ ಆಗಿ ಸಿದ್ದಿಕ್ ಅಲ್‌ಅಮಿನ್, ಇಮ್ತಿಯಾಝ್ ಝೆಡ್‌ಬಿ, ಕೋಶಾಧಿಕಾರಿಯಾಗಿ ಮುಹಮ್ಮದ್ ಅಲಿ ಕೋಚಕಟ್ಟೆ, ಸಲಹೆಗಾರರಾಗಿ ಇಸ್ಮಾಯಿಲ್ ಅಲ್‌ಅಮೀನ್, ಶರೀಫ್ ಮಶ್ರೀಕ್, ಸೋಶಿಯಲ್ ಮೀಡಿಯಾ ಪ್ರಚಾರಕರಾಗಿ ಆಶೀಕ್ ಕೆ.ಎ.ಕೋಚಕಟ್ಟೆ, ಕರೀಂ ಡಿ.ಎಸ್., ಅವರನ್ನು ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಅಶ್ರಫ್ ಎಂ., ಅಬ್ಬಾಸ್ ಮಕ್ಬೂಲ್, ಅಬ್ದುಲ್ ರಹಿಮಾನ್ ಎರ್ಮಾಳ, ಹನೀಫ್ ಎ.ಕೆ.ಫರ್ನೀಚರ್, ಇರ್ಷಾದ್ ಅಲ್‌ಅಮೀನ್, ಇಮ್ರಾನ್ ಎಂ.ಕೆ., ಬದ್ರುದ್ದೀನ್ ಮಕ್ಬೂಲ್, ಶಾಕೀರ್, ಮುಸ್ತಫಾ ಎರ್ಮಾಳ, ಹಮೀದ್ ಮಶ್ರೀಕ್, ಬಶೀರ್ ಕೆ.ಪಿ., ಅಶ್ರಫ್ ಅನ್ನಡ್ಕ, ಅಬ್ದುಲ್ ಹಮೀದ್ ಡಿ.ಎಸ್., ಅಶ್ರಫ್ ಮುಸ್ಲಿಯಾರ್ ಕೋಲ್ಪೆ, ಖಲೀಲ್ ಪಿ.ಎ. ಅವರನ್ನು ಆಯ್ಕೆ ಮಾಡಲಾಯಿತು.


ಗೋಳಿತ್ತೊಟ್ಟು ಜಮೀಲಾ ಮಸೀದಿಯ ಖತೀಬರಾದ ಹನೀಫ್ ದಾರಿಮಿ ಉದ್ಘಾಟಿಸಿದರು. ಅಶ್ರಫ್ ಮುಸ್ಲಿಯಾರ್ ಕೋಲ್ಪೆ ಶುಭಹಾರೈಸಿದರು. ಶಾಖೆಯ ಕಾರ್ಯದರ್ಶಿ ಸಿದ್ದೀಕ್ ಯಮಾನಿ ಸ್ವಾಗತಿಸಿದರು. ನ.14ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಖ್ಯಾತ ವಾಗ್ಮಿ, ಬಹುಬಾಷಾ ಪಂಡಿತ ಅಬ್ದುಲ್ ಸಮದ್ ಪೂಕಟೂರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವಾರು ಧಾರ್ಮಿಕ, ಸಾಮಾಜಿಕ ನೇತಾರರೂ ಭಾಗವಹಿಸಲಿದ್ದಾರೆ ಎಂದು ನೂತನ ಸಮಿತಿ ವೈಸ್ ಕನ್ವೀನರ್ ಸಿದ್ದೀಕ್ ಅಲ್‌ಅಮಿನ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here