ಕಾಣಿಯೂರು: ಒಡಿಯೂರು ಗ್ರಾಮ ವಿಕಾಸ ಯೋಜನೆಯ ಸವಣೂರು ವಲಯದ ಚಾರ್ವಾಕ ಗ್ರಾಮದ ನಂದ ಸ್ವಸಹಾಯ ತಂಡದ ಸದಸ್ಯ ಮೋಹನ ಅವರು ಇತ್ತೀಚಿಗೆ ನಿಧನಹೊಂದಿದ್ದು, ಅವರಿಗೆ ಮಂಜೂರು ಜೀವ ಭದ್ರತೆ ವಿಮೆಯ ಚೆಕ್ ನ್ನು ಮೋಹನರವರ ಪತ್ನಿ ಪ್ರವೀಣರವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿಗಳಾದ ಹರ್ಷಿತಾ, ರಕ್ಷಿತಾ, ಸವಣೂರು ವಲಯಧ್ಯಕ್ಷ ಬಾಲಕೃಷ್ಣ ರೈ ಕಾಸ್ಪಾಡಿಗುತ್ತು, ಸವಣೂರು ವಲಯ ಸಂಯೋಜಕಿ ವೇದಾವತಿ, ಚಾರ್ವಾಕ ಗ್ರಾಮದ ಸೇವಾದಿಕ್ಷಿತೆ ಕವಿತಾ ಇಡ್ಯಡ್ಕ ಉಪಸ್ಥಿತರಿದ್ದರು.
![](https://puttur.suddinews.com/wp-content/uploads/2023/10/d2153a90-c072-4b3e-8ebc-7032a1db0ae9.jpg)