ಪ್ರಶಾಂತ್ ಪಲ್ಲತ್ತಡ್ಕರಿಗೆ ತಿಂಗಳಾಡಿ ರೋಟರ‍್ಯಾಕ್ಟ್ ಕ್ಲಬ್‌ನಿಂದ ಶ್ರದ್ಧಾಂಜಲಿ ಸಭೆ

0

ಪುತ್ತೂರು: ತಿಂಗಳಾಡಿ ರೋಟರ‍್ಯಾಕ್ಟ್ ಕ್ಲಬ್‌ನ ಮಾಜಿ ಅಧ್ಯಕ್ಷರಾಗಿದ್ದ ಇತ್ತೀಚಿಗೆ ನಿಧನ ಹೊಂದಿದ ಪ್ರಶಾಂತ್ ಪಲ್ಲತ್ತಡ್ಕರವರಿಗೆ ಕ್ಲಬ್ ವತಿಯಿಂದ ನ.4 ರಂದು ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಕ್ಲಬ್‌ನ ಸ್ಥಾಪಕ ಸಭಾಪತಿಗಳು ಹಾಗೂ ಮಾಜಿ ಅಧ್ಯಕ್ಷರುಗಳು ಪ್ರಶಾಂತ್ ರವರಿಗೆ ನುಡಿನಮನ ಮಾಡುತ್ತಾ, ತಮಗೆ ತಿಳಿದಿರುವಂತೆ ಒಳ್ಳೆಯ ಗುಣನಡತೆ, ಸ್ನೇಹ ಬಾಂಧವ್ಯದ ವ್ಯಕ್ತಿ ಯಾಗಿ ಸಮಾಜದಲ್ಲಿ ಹಾಗೂ ರೋಟರಿ, ರೋಟರ‍್ಯಾಕ್ಟ್‌ಗಳಲ್ಲಿ ಪ್ರಶಾಂತ್‌ರವರು ಗುರುತಿಸಿಕೊಂಡಿದ್ದರು ಎಂದರು.

ಸ್ಥಾಪಕ ಸಭಾಪತಿ ಹರೀಶ್ ಕೆ ಪುತ್ತೂರಾಯ ಅವರು ಮಾತಾನಾಡಿ ಯುವಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಜಾಗ್ರತರಾಗಬೇಕು, ಅತೀ ಸಣ್ಣ ಪ್ರಾಯದಲ್ಲಿ ಪ್ರಶಾಂತ್ ಅಗಲಿದ್ದಾರೆ ಇದು ತುಂಬಾ ಬೇಸರದ ಸಂಗತಿಯಾಗಿದೆ ಎಂದು ಹೇಳಿದರು. ಶರತ್ ಕುಮಾರ್ ಜಿ. ರವರು ಮಾತನಾಡಿ, ಪ್ರಶಾಂತ್ ರವರ ಸ್ಮರಣಾರ್ಥ ಅವರು ಹುಟ್ಟಿದ ದಿನದಂದು ಪ್ರತಿವರ್ಷ ರಕ್ತದಾನ ಮಾಡೋಣ, ಉತ್ತಮ ಸಮಾಜ ಸೇವಕನನ್ನು ಕಳೆದುಕೊಂಡಿದ್ದೇವೆ, ರೋಟರಿ ಕ್ಲಬ್ ಪುತ್ತೂರು ಪೂರ್ವದ ಅಧ್ಯಕ್ಷರಾಗಿದ್ದ ಜಯಂತ ನಡುಬೈಲು ಅವರ ಅವಧಿಯಲ್ಲಿ ತಿಂಗಳಾಡಿ ರೋಟರ್ಯಕ್ಟ್ ನ ಅಧ್ಯಕ್ಷರಾಗಿದ್ದರು ಎಂದು ನೆನಪಿಸಿಕೊಂಡರು. ಸೂರ್ಯಪ್ರಸನ್ನ ರೈ ಮಾತನಾಡಿ ಹಲವಾರು ಸಂದರ್ಭದ ಒಡನಾಟ ಹಾಗೂ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಬಹಳ ಬೇಗ ಅತ್ಮಿಯತೆ ಬೆಳೆಸುವ ಗುಣ ಅವರಲ್ಲಿತ್ತು ಎಂದರು.


ಸಭೆಯಲ್ಲಿ ಕ್ಲಬ್‌ನ ಅಧ್ಯಕ್ಷ ಹರ್ಷಿತ್ ರೈ ಕೆ, ನಿಕಟಪೂರ್ವಧ್ಯಕ್ಷ ಪ್ರದ್ವಿನ್ ರೈ, ಕ್ಲಬ್ ಸಲಹೆಗಾರರಾದ ಅನೀಶ್ ಶೆಟ್ಟಿ , ರೋಟರ‍್ಯಾಕ್ಟ್ ಜಿಲ್ಲಾ ಸಮಿತಿ ಸದಸ್ಯರಾದ ಹರೀಶ್ ರೈ. ಎಂ., ಕ್ಲಬ್ ಸದಸ್ಯರಾದ ಯುವ ರಂಗ ಕೆದಂಬಾಡಿಯ ಅಧ್ಯಕ್ಷ ನಿತೇಶ್ ರೈ ಕೋರಂಗ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕ್ಲಬ್ ಕಾರ್ಯದರ್ಶಿ ಹರೀಶ್ ರೈ ವಂದಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಮೃತರಿಗೆ ಗೌರವ ಸೂಚಿಸಿ 1 ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here