ಬಜತ್ತೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ- ಹಿರಿಯ/ಕಿರಿಯ ವಿಭಾಗದಲ್ಲಿ ಕಾಂಚನ ಶಾಲೆಗೆ ಸಮಗ್ರ ಪ್ರಶಸ್ತಿ

0

ನೆಲ್ಯಾಡಿ: ಗೋಳಿತ್ತಟ್ಟು-ಶಾಂತಿನಗರ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನ.7ರಂದು ನಡೆದ ಬಜತ್ತೂರು ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಲಭಿಸಿದೆ.

  • ಹಿರಿಯ ವಿಭಾಗದ ಚಿತ್ರಕಲೆ-ಗೌತಮ್ 6ನೇ ದ್ವಿತೀಯ, ಕ್ಲೇ ಮಾಡೆಲಿಂಗ್-ಮೋಕ್ಷಿತ್ 7ನೇ ದ್ವಿತೀಯ, ಆಶುಭಾಷಣ-ಶನ್ವಿ 5ನೇ ದ್ವಿತೀಯ, ಕಥೆ ಹೇಳುವುದು- ಚರಣ್ ಎಸ್ 7ನೇ ಪ್ರಥಮ, ಇಂಗ್ಲೀಷ್ ಕಂಠಪಾಠ-ಪ್ರಣವಿ ಕೆ 7ನೇ ದ್ವಿತೀಯ, ಧಾರ್ಮಿಕ ಪಠಣ ಸಂಸ್ಕೃತ – ಶ್ರೀಕೃಷ್ಣ 5ನೇ ಪ್ರಥಮ, ಲಘು ಸಂಗೀತ-ಭೂಮಿಕಾ 5ನೇ ತೃತೀಯ, ಛದ್ಮವೇಷ – ಧನ್ಯಶ್ರೀ 6ನೇ ತೃತೀಯ, ಮಿಮಿಕ್ರಿ – ವೈಶಾಖ್ 7ನೇ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
  • ಕಿರಿಯ ವಿಭಾಗದ ಧಾರ್ಮಿಕ ಪಠಣ ಸಂಸ್ಕೃತ – ಗೌತಮ್ 4ನೇ ಪ್ರಥಮ, ಲಘು ಸಂಗೀತ-ಶ್ರಾವ್ಯ 4ನೇ ಪ್ರಥಮ, ಅಭಿನಯ ಗೀತೆ-ಪೂರ್ವಿ 4ನೇ ತೃತೀಯ, ಕಥೆ ಹೇಳುವುದು – ದೀಕ್ಷಾ ಡಿ 4ನೇ ಪ್ರಥಮ, ಭಕ್ತಿ ಗೀತೆ-ಶ್ರಾವ್ಯ 4ನೇ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಶಾಲಾ ಮುಖ್ಯಶಿಕ್ಷಕ ಎ.ಲಕ್ಷ್ಮಣ ಗೌಡ ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.

LEAVE A REPLY

Please enter your comment!
Please enter your name here