ಬನ್ನೂರು: ಚಿರತೆ ಕಾಣಿಸಿಕೊಂಡಿದೆಯೆಂಬ ವಾಟ್ಸಪ್ ಸಂದೇಶ – ಗ್ರಾಮಸ್ಥರಲ್ಲಿ ಆತಂಕ

0

ಪುತ್ತೂರು: ಬನ್ನೂರು ಪಡ್ನೂರು ಪರಿಸರದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನೆಯಾಗುತ್ತಿದ್ದು ಗ್ರಾಮಸ್ಥರು ಆತಂಕಗೊಂಡ ಬಗ್ಗೆ ವರದಿಯಾಗಿದೆ.


ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಮಾಹಿತಿ ಇದೆ. ಎಚ್ಚರದಿಂದ ಓಡಾಟ ನಡೆಸಿ ಎಂಬ ಸಂದೇಶ ಮತ್ತು ಚಿರತೆಯ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ರವಾನೆಯಾಗುತ್ತಿದೆ. ಈ ಕುರಿತು ಬನ್ನೂರು ಗ್ರಾಮಸ್ಥರು ಆತಕಂಗೊಂಡಿದ್ದಾರೆ. ಚಿರತೆ ಕಾಣಿಸಿಕೊಂಡಿರುವ ಮತ್ತು ಚಿರತೆ ಓಡಾಟ ಇದೆ ಎಂಬ ಕುರಿತು ಪೊಲೀಸ್ ಇಲಾಖೆಗಾಗಲಿ, ಅರಣ್ಯ ಇಲಾಖೆಗಾಗಲಿ ಯಾವುದೇ ದೂರು ಬಂದಿಲ್ಲ. ಆದರೂ ಬನ್ನೂರು ಗ್ರಾಮದ ಸಾಮಾಜಿಕ ಜಾಲತಾಣದ ಗ್ರೂಪ್‌ವೊಂದರಲ್ಲಿ ಈ ಸಂದೇಶ ರವಾನೆಯಾಗುತ್ತಿದೆ.

LEAVE A REPLY

Please enter your comment!
Please enter your name here