ಉಪ್ಪಿನಂಗಡಿ ಜೇಸಿಐಗೆ ಹಲವು ಪ್ರಶಸ್ತಿ

0

ಉಪ್ಪಿನಂಗಡಿ: ಜೇಸಿಐ ಪುತ್ತೂರು ಘಟಕದ ನೇತೃತ್ವದಲ್ಲಿ ನಡೆದ ವಲಯ ಸಮ್ಮೇಳನ ಸಂಭ್ರಮ – 2023ರಲ್ಲಿ ಉಪ್ಪಿನಂಗಡಿ ಜೇಸಿಐಯ ಸಾಧನೆಗಾಗಿ ಜೇಸಿಐ ಅಧ್ಯಕ್ಷ ಶೇಖರ ಗೌಂಡತ್ತಿಗೆ ಅವರಿಗೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.


ಜೇಸಿಐ ಉಪ್ಪಿನಂಗಡಿ ಘಟಕವು ಆಯೋಜಿಸಿದ ಹಲಸು ಹಬ್ಬ ಮತ್ತು ಆಹಾರ ಮೇಳಕ್ಕೆ “ಅತ್ಯುತ್ತಮ ಸ್ಥಳೀಯ ವ್ಯಾಪಾರ ವಾಣಿಜ್ಯೋದ್ಯಮ ರನ್ನರ್ ಪ್ರಶಸ್ತಿ”, ಭಾರತದ ರಾಷ್ಟ್ರೀಯ ಕಾರ್ಯಕ್ರಮದ ಪುರಸ್ಕಾರ, ಗೋಲ್ಡನ್ ಘಟಕ ಪ್ರಶಸ್ತಿ, ಜೇಸಿ ಸೇವಾ ರತ್ನ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭ ಜೇಸಿಐ ವಲಯಾಧಿಕಾರಿಯಾದ ಉಪ್ಪಿನಂಗಡಿ ಜೇಸಿಐನ ನಿಕಟಪೂರ್ವಾಧ್ಯಕ್ಷ ಮೋಹನ್‌ಚಂದ್ರ ತೋಟದಮನೆ ಅವರು ವಲಯದ ಪತ್ರಿಕೆ ಉದಕದ ಸಂಪಾದಕರಾಗಿ ನೀಡಿದ ಸೇವೆಯನ್ನು ಗುರುತಿಸಿ ವಲಯ ಸಂಯೋಜಕರಿಗೆ ಕೊಡಮಾಡುವ ‘ಅತ್ಯುತ್ತಮ ವಲಯ ಸಂಯೋಜಕರ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು.
ಪುರುಷೋತ್ತಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನದಲ್ಲಿ ಘಟಕದ ಪೂರ್ವಾಧ್ಯಕ್ಷರಾದ ಡಾ. ರಾಜಾರಾಮ್ ಕೆ.ಬಿ., ಪ್ರಶಾಂತ್ ಕುಮಾರ್ ರೈ, ಹರೀಶ್ ನಾಯಕ್ ನಟ್ಟಿಬೈಲು, ಆನಂದ ರಾಮಕುಂಜ, ಉಮೇಶ್ ಆಚಾರ್ಯ, ಶಶಿಧರ್ ನೆಕ್ಕಿಲಾಡಿ, ಕಾರ್ಯದರ್ಶಿ ಸುರೇಶ್, ದಿವಾಕರ ಶಾಂತಿನಗರ, ಮುರಳೀಧರ, ಶ್ರೀಮತಿ ಪ್ರೇಮಾ, ಆನಂದ ರಾಮಕುಂಜ, ಶ್ರೀಮತಿ ಭವಿತಾ, ಮಾ. ದಿಶಾಂತ್ ಮತ್ತು ಮಾ. ಅಭಿನವ್ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here