ದೀಪಾವಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್‍ಸ್ ನಿಂದ ಆಕರ್ಷಕ ಕೊಡುಗೆ

0

ಪುತ್ತೂರು: ಹಬ್ಬಗಳಿಗೆ ಹೊಸ ಚಿನ್ನ ಖರೀದಿಸಿ ಖುಷಿಪಡುವ ಗ್ರಾಹಕರಿಗೆ ಪುತ್ತೂರಿನ ಚಿನ್ನಾಭರಣಗಳ ಮಳಿಗೆ ಜಿ. ಎಲ್.ಆಚಾರ್ಯ ಜ್ಯುವೆಲ್ಲರ್‍ಸ್‌ನಲ್ಲಿ ದೀಪಾವಳಿ ಹಬ್ಬದ ಸಂತೋಷವನ್ನು ಇಮ್ಮಡಿಗೊಳಿಸಲು ವಿಶೇಷ ಆಫರ್ ಕಲ್ಪಿಸಲಾಗಿದೆ. ನ.11ರಿಂದ 14ರ ತನಕ ವಜ್ರ, ಚಿನ್ನ ಹಾಗೂ ಬೆಳ್ಳಿಯ ಆಭರಣಗಳ ಖರೀದಿಗೆ ಆಕರ್ಷಕ ಕೊಡುಗೆಗಳು ಇರಲಿವೆ.


ಚಿನ್ನಾಭರಣ ಪ್ರತಿ ಗ್ರಾಂ.ಗೆ 125 ರೂ ವರೆಗೆ., ವಜ್ರಾಭರಣ ಪ್ರತಿ ಕ್ಯಾರೆಟ್ ಮೇಲೆ 5 ಸಾವಿರ ರೂ. ಹಾಗೂ ಬೆಳ್ಳಿಯ ಆಭರಣ ಪ್ರತಿ ಕೆ.ಜಿ.ಗೆ 2 ಸಾವಿರ ರೂ. ರಿಯಾಯಿತಿ ನೀಡಲಾಗುವುದು. ವಿಶ್ವಾಸ, ಪರಿಶುದ್ಧತೆ, ಪರಂಪರೆ, ನವನವೀನ ವಿನ್ಯಾಸ ಹಾಗೂ ಗ್ರಾಹಕ ಸೇವೆಗಳಿಗೆ ಸದಾ ಸಂಸ್ಥೆ ಬದ್ದವಾಗಿದ್ದು, ಗ್ರಾಹಕರ ಮನಸೂರೆಗೊಳ್ಳುವ ವಿನೂತನ ವಿನ್ಯಾಸದ ಚಿನ್ನ, ವಜ್ರ, ಬೆಳ್ಳಿ ಮತ್ತು ಆಂಟಿಕ್ ಆಭರಣಗಳು, ಅನ್ ಕಟ್ ಡೈಮಂಡ್ಸ್ ಹಾಗೂ ಅಮೂಲ್ಯ ಹರಳುಗಳ ವಿಪುಲ ಸಂಗ್ರಹವಿದೆ. ಪಾರ್ಕಿಂಗ್ ವ್ಯವಸ್ಥೆ ಲಭ್ಯವಿದೆ ಆಧುನಿಕ ಮತ್ತು ಪಾರಂಪರಿಕ ಚಿನ್ನ ವಜ್ರಾಭರಣ, ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಯು ಸುಳ್ಯ, ಹಾಸನ ಹಾಗೂ ಕುಶಾಲನಗರದಲ್ಲಿ ತಮ್ಮ ಮಳಿಗೆಗಳನ್ನು ಹೊಂದಿದೆ. ದೀಪಾವಳಿಯ ಈ ವಿಶೇಷ ಆಫರ್ ಎಲ್ಲ ಮಳಿಗೆಗಳಲ್ಲಿ ಲಭ್ಯವಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here