ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಾರ್ವಾಕ ಸಿ.ಎ ಬ್ಯಾಂಕಿನ ಸಿಇಓ ಅಶೋಕ್ ಗೌಡರಿಗೆ ಸನ್ಮಾನ

0

ಕಾಣಿಯೂರು: ಪುತ್ತೂರು ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಪುತ್ತೂರು ಹಾಗೂ ಕಡಬ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ 20 ಅಂಶಗಳ ಸಭೆಯಲ್ಲಿ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರದ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು ವಹಿಸಿದ್ದರು. ಅತಿಥಿಗಳಾಗಿ ಪುತ್ತೂರು ಉಪ ವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ತ್ರಿವೇಣಿ ರಾಮ, ಸಹಕಾರ ಅಭಿವೃದ್ಧಿ ಅಧಿಕಾರಿ ಶೋಭಾ, ಜಿಲ್ಲಾ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಾದ ಹರೀಶ್ ಉಪಸ್ಥಿತರಿದ್ದರು. ವಲಯ ಮೇಲ್ವೀಚಾರಕಾರದ ವಸಂತ್ ಎಸ್, ಶರತ್, ಪ್ರದೀಪ್, ಮನೋಜ್, ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ನರಿಮೊಗರಿನ ಮಧುಕರ್, ಮುಂಡೂರಿನ ಜಯಪ್ರಕಾಶ್ ರೈ, ಬನ್ನೂರಿನ ರಾಧ ರೈ, ನೆಲ್ಯಾಡಿಯ ದಯಾಕರ ರೈ, ಕೊಳ್ತಿಗೆಯ ಹಂಸಾವತಿ, ಕಡಬದ ಬಾಲಕೃಷ್ಣ, ಬಲ್ನಾಡಿನ ಸೀತಾರಾಮ ಗೌಡ, ಆರ್ಯಾಪಿನ ಜಯಂತಿ, ಉಪ್ಪಿನಂಗಡಿಯ ಕ್ಲೇರಿ ವೇಗಸ್, ಪಾಣಾಜೆಯ ಹರೀಶ್, ಬಿಳಿನೆಲಯ ಪುನೀತ್, ಹೊಸ್ಮಠದ ಸೋಮಸುಂದರ್ ಶೆಟ್ಟಿ, ಅಲಂಕಾರಿನ ಪದ್ಮಪ್ಪ ಗೌಡ, ಕೆದಂಬಾಡಿಯ ವಿನಯ ರೈ, ಕುಂಬ್ರದ ಭವಾನಿ, ಎಡಮಂಗಲದ ರಮೇಶ್, ಸುಬ್ರಹ್ಮಣ್ಯದ ಐನಿಕಿದುವಿನ ಪ್ರಕಾಶ್, ಏನೆಕಲ್ಲಿನ ರತನ್, ಕಾವು ಸಹಕಾರ ಸಂಘದ ಕೇಶವ ಹಾಗೂ ಸಹಕಾರ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸವಣೂರು ಸಿಇಓ ಚಂದ್ರಶೇಖರ್ ಸ್ವಾಗತಿಸಿ, ಇರ್ದೆ ಬೆಟ್ಟಂಪಾಡಿ ಸಿಇಓ ರಾಮಯ್ಯ ರೈ ವಂದಿಸಿದರು.

LEAVE A REPLY

Please enter your comment!
Please enter your name here