ಅಜ್ಜಿಕಲ್ಲು ಮುಂಡೋದಮೂಲೆ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ

0

ನಿಡ್ಪಳ್ಳಿ;  ಅಂಗನವಾಡಿ ಕೇಂದ್ರ ಮುಂಡೋದಮೂಲೆ ಅಜ್ಜಿಕಲ್ಲು ಇಲ್ಲಿ ಬಾಲಮೇಳ ಕಾರ್ಯಕ್ರಮ ನ.20 ರಂದು ನಡೆಯಿತು.ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಬಾಲವಿಕಾಸ ಸಮಿತಿ ಅಧ್ಯಕ್ಷೆ ಹರಿಣಾಕ್ಷಿ ಶರತ್ ದೇವಸ್ಯ ಅಧ್ಯಕ್ಷತೆ ವಹಿಸಿದ್ದರು. ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯರಾದ  ಮಹೇಶ್ ರೈ ಕೇರಿ,  ವನಿತಾ ಮನೋಜ್, ನಳಿನಾಕ್ಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಲಯ ಮೇಲ್ವಿಚಾರಕರಾದ  ಆರತಿ, ಏಕತಡ್ಕ ಶಾಲಾ ಪ್ರಭಾರ ಮುಖ್ಯಗುರುಗಳಾದ  ಚಿತ್ರಾ.ವಿ.ರೈ , ಸಂಜೀವಿನಿ ಸಂಘಗಳ ಎಂ.ಬಿ.ಕೆ.  ಚಂದ್ರಿಕಾ ಲೋಕೇಶ್ ಉಪಸ್ಥಿತರಿದ್ದರು.

ಅಂಗನವಾಡಿ ಕೇಂದ್ರದ ವರದಿಯನ್ನು ಕಾರ್ಯಕರ್ತೆ  ಗೀತಾ. ಡಿ ವಾಚಿಸಿದರು. ಬಾಲಮೇಳದ ಪ್ರಯುಕ್ತ ಆಯೋಜಿಸಿದ ಸ್ಪರ್ಧೆಗಳ ಬಹುಮಾನವನ್ನು ವಿತರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ  ಗೀತಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಉಷಾ ಕೃಷ್ಣಪ್ರಸಾದ್ ವಂದಿಸಿದರು.  ಚೇತನಾ ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಸಹಾಯಕಿ  ರತಿ.ಪಿ, ಬಾಲವಿಕಾಸ ಸಮಿತಿ ಪದಾಧಿಕಾರಿಗಳು, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಮಕ್ಕಳ ಪೋಷಕರು, ಸಹಕರಿಸಿದರು.ಸಭಾ ಕಾರ್ಯಕ್ರಮದ ನಂತರ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. 

LEAVE A REPLY

Please enter your comment!
Please enter your name here