ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಿನ್ನೆಲೆ – ಗ್ರಾಮಸ್ಥರೊಂದಿಗೆ ಕ್ಷೇತ್ರದ ತಂತ್ರಿವರ್ಯರ, ಬ್ರಹ್ಮವಾಹಕರ ಸಭೆ

0

ಪುತ್ತೂರು: ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಮಾ.20ರಿಂದ ಎ.2 ರ ವರೆಗೆ ನಡೆಯಲಿರುವ ಬ್ರಹ್ನಕಲಶೋತ್ಸವ ಹಾಗೂ ಜಾತ್ರೋತ್ಸವದ ಹಿನ್ನೆಲೆಯಲ್ಲಿ ಗ್ರಾಮಸ್ಥರೊಂದಿಗೆ ಕ್ಷೇತ್ರದ ತಂತ್ರಿವರ್ಯರ ಹಾಗೂ ಬ್ರಹ್ಮವಾಹಕರ ಸಭೆಯು ಕ್ಷೇತ್ರದಲ್ಲಿ ನಡೆಯಿತು.

ತಂತ್ರಿವರ್ಯರಾದ ಕೆಮ್ಮಿಂಜೆ ಕಾರ್ತಿಕ್ ತಂತ್ರಿಗಳು ಹಾಗೂ ಬ್ರಹ್ಮವಾಹಕರಾದ ಗೋಪಾಲಕೃಷ್ಣ ಅಡಿಗ ಕುಂಬ್ಳೆರವರು ಆಗಮಿಸಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು. ವ್ಯವಸ್ಥಾಪನಾ‌ ಸಮಿತಿ ಅಧ್ಯಕ್ಷ ಜನಾರ್ದನ ಎರ್ಕಡಿತ್ತಾಯ, ಕ್ಷೇತ್ರದ ಸಿಬ್ಬಂಧಿ ಮುರಳೀಧರ ಬಡಿಕಿಲ್ಲಾಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ದೀರಜ್ ಹಿರ್ಕುಡೆಲು, ಕಾರ್ಯದರ್ಶಿ ಕೃಷ್ಣರಾಜ ಎರ್ಕಡಿತ್ತಾಯ, ಕೋಶಾಧಿಕಾರಿ ಮಹಾಬಲ ಗೌಡ ಗಡಿಮಾರು, ಅಬಿವೃದ್ಧಿ ಸಮಿತಿ ಕಾರ್ಯದರ್ಶಿ ಮನೋಹರ ಕೊಳಕ್ಕಿಮಾರು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುದೀರ್ ಪ್ರಸಾದ್ ಆನಾಜೆ, ಸುಬ್ರಾಯ ನಾಯ್ಕ್ ಕೊಳಕ್ಕಿಮಾರ್, ಗಿರಿಧರ ಗೌಡ ಗೋಮುಖ, ಸುದರ್ಶಣ್ ವೈಲಾಯ ಸಿಹಿತ ವಿವಿಧ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here