ಎಸ್,ಬಿ.ಐ ನಿವೃತ್ತ ಉದ್ಯೋಗಿ ಕಾರ್ಜಾಲು ನಿವಾಸಿ ಪೂವಪ್ಪ ನಾಯ್ಕ್ ನಿಧನ

0

ಪುತ್ತೂರು: ಪುತ್ತೂರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಉದ್ಯೋಗಿ ಕಬಕ ಗ್ರಾಮದ ಕಾರ್ಜಾಲು ನಿವಾಸಿ ಪೂವಪ್ಪ ನಾಯ್ಕ್(65ವ)ರವರು ಡಿ.11ರಂದು ಸ್ವಗೃಹದಲ್ಲಿ ನಿಧನರಾದರು.


ಮೂಲತಃ ಪುಣಚ ಗ್ರಾಮದವರಾಗಿದ್ದು, ಪುತ್ತೂರು ಕಾರ್ಜಾಲುವಿನಲ್ಲಿ ವಾಸ್ತವ್ಯ ಹೊಂದಿದ್ದರು. ಅವರ ಪತ್ನಿ ಎರಡು ವರ್ಷದ ಹಿಂದೆ ನಿಧನರಾಗಿದ್ದು, ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಡಿ. 11ರಂದು ಹಗಲು ಅವರ ಭಾವ ಪೋನ್ ಕರೆ ಮಾಡಿದಾಗ ಪೂವಪ್ಪ ನಾಯ್ಕ ಅವರು ಕರೆ ಸ್ವೀಕರಿಸಿರಲಿಲ್ಲ. ಈ ಕುರಿತು ಅವರ ಸಹೋದರ ಪುಣಚ ಮೂಡಂಬೈಲು ನಿವಾಸಿ ಜನಾರ್ದನ ನಾಯ್ಕ ಅವರಿಗೆ ಕರೆ ಮಾಡಿದಂತೆ ಅವರು ಮನೆಗೆ ಬಂದು ಮನೆಯ ಹಿಂಬದಿಯ ಬಾಗಿಲನ್ನು ತೆರೆದು ನೋಡಿದಾಗ ಪೂವಪ್ಪ ನಾಯ್ಕ ಅವರು ಮನೆಯ ಡೈನಿಂಗ್ ಹಾಲ್‌ನಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಘಟನೆ ಕುರಿತು ಅವರ ಸಹೋದರ ನೀಡಿದ ದೂರಿನಂತೆ ಪುತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here