ಕೆಯ್ಯೂರು ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಇದರ ವತಿಯಿಂದ ಕೆಪಿಎಲ್ ಸೀಸನ್ 3 ಕ್ರಿಕೆಟ್ ಪಂದ್ಯಾಟ ಮತ್ತು 20ನೇ ವರ್ಷದ ವಾರ್ಷಿಕೋತ್ಸವದ ಸಮಲೋಚನಾ ಸಭೆ 

0

ಕೆಯ್ಯೂರು;  ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಕೆಯ್ಯೂರು ಇದರ ವತಿಯಿಂದ ಕೆಪಿಎಲ್ ಸೀಸನ್ 2 ಕ್ರಿಕೆಟ್ ಪಂದ್ಯಾಟ ಮತ್ತು 20ನೇ ವರ್ಷದ ವಾರ್ಷಿಕೋತ್ಸವದ ಸಮಲೋಚನಾ ಸಭೆಯು ಕೆಯ್ಯೂರು ಜಯಕರ್ನಾಟಕ ಸಬಾಭವನದಲ್ಲಿ ದ.10ರಂದು  ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಕೆಯ್ಯೂರು ಗೌರವದ್ಯಕ್ಷ ಎಸ್.ಬಿ. ಜಯರಾಮ ರೈ ಬಳಜ್ಜ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಜ 26ರಿಂದ 29ತನಕ ನಡೆಯುವ ಕೆಪಿಎಲ್ ಸೀಸನ್ 3 ಕ್ರಿಕೆಟ್‌ ಪಂದ್ಯಾಟ, ಮತ್ತು ವಾರ್ಷಿಕೋತ್ಸವದ  ಪೂರ್ವ ತಯಾರಿಯ ಬಗ್ಗೆ ಸಭೆಯಲ್ಲಿ ಪ್ರಾಸ್ತವಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ದುರ್ಗಾ ಸ್ಪೋರ್ಟ್ಸ್ ಸ್ಥಾಪಾಕಧ್ಯಕ್ಷ ರಾಧಕೃಷ್ಣ ರೈ ಸಣಂಗಳ,  ಗೌರವ ಸಲಹೆಗಾರ  ಕೃಷ್ಣಪ್ರಸಾದ್ ರೈ ಕಣಿಯಾರು, ತಾರಾನಾಥ ರೈ ಕೊಡಂಬು, ಮಾಜಿ ಅಧ್ಯಕ್ಷ ಶರತ್ ಕುಮಾರ್ ರೈ ದೇರ್ಲ, ಸತೀಶ್ ರೈ ದೇವಿನಗರ , ಅಧ್ಯಕ್ಷ  ಕೆ.ಯಸ್ ದಿನೇಶ್, ಉಪಾಧ್ಯಕ್ಷ ಹರೀಶ್ ಶೆಟ್ಟಿ, ಕೆಯ್ಯೂರು ಕಾರ್ಯದರ್ಶಿ ಪ್ರವೀಣ್ ಕಟ್ಟತ್ತಾರು,ಕೋಶಾಧಿಕಾರಿ ಯಸ್ ಚಂದ್ರಶೇಖರ ರೈ ಸಣoಗಳ ,ಕ್ರೀಡಾಕಾರ್ಯದರ್ಶಿ ಶಕೂರ್ ಮೇರ್ಲ ,ಜೊತೆ ಕಾರ್ಯದರ್ಶಿ ಸಂಪತ್ ಕೆಯ್ಯೂರು,ಸಂಘಟನ ಕಾರ್ಯದರ್ಶಿ ಬಾಲಕೃಷ್ಣ ಕೆಯ್ಯೂರು, ಮತ್ತು  ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here