ನಾಳೆ(ಡಿ.17): ನಟರಾಜ ವೇದಿಕೆಯಲ್ಲಿ ಗಾನಸಿರಿಯ ಅದ್ದೂರಿ ವಾರ್ಷಿಕೋತ್ಸವ

0

ಪುತ್ತೂರು: ನಾಡಿನ ಬಲುದೊಡ್ಡ ಸುಗಮ ಸಂಗೀತ ಸಂಸ್ಥೆ ಡಾ‌.ಕಿರಣ್ ಕುಮಾರ್ ಸಾರಥ್ಯದ ಗಾನಸಿರಿ ಕಲಾ ಕೇಂದ್ರ (ರಿ) ಪುತ್ತೂರು ಇದರ ಪುತ್ತೂರು ಪ್ರಧಾನ ಶಾಖೆಯ ವಾರ್ಷಿಕ ಸಂಗೀತ ಹಬ್ಬ ವರುಷ 22 ರ ಹೆಜ್ಜೆಯ ಸುಮಧುರ ಸಂಗೀತ ಲಹರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಡಿ.17ರಂದು ಅಪರಾಹ್ನ 1.30 ರಿಂದ ರಾತ್ರಿ 8.00 ರವರೆಗೆ ನಡೆಯಲಿದೆ.


ಗಾನಸಿರಿಯ ಸಂಗೀತ ಕಾರ್ಯಕ್ರಮಗಳು ವಿಭಿನ್ನತೆ ಮತ್ತು ವಿಶಿಷ್ಠತೆಗೆ ಹೆಸರುವಾಸಿಯಾಗಿದ್ದು ಕಾರ್ಯಕ್ರಮವನ್ನು ಗಾನಸಿರಿಯ ಅಪ್ಪಟ ಅಭಿಮಾನಿಯಾಗಿರುವ ಉದ್ಯಮಿ ಶ್ರೀ ಅಶೋಕ್ ಭಟ್ ರವರು ಉದ್ಘಾಟಿಸಲಿರುವುದು ವಿಶೇಷ.‌‌‌ ವಾರ್ಷಿಕ‌ ಹಬ್ಬದ ಈ ಸಂಗೀತ ಕಾರ್ಯಕ್ರಮದಲ್ಲಿ ಗಾನಸಿರಿ ಪುತ್ತೂರು ಶಾಖೆಯ ಜೂನಿಯರ್ ಹಾಗೂ ಸೀನಿಯರ್ ವಿದ್ಯಾರ್ಥಿಗಳಿಗೆ ಟಿ‌.ವಿ ರಿಯಾಲಿಟಿ ಶೋ ಮಾದರಿಯಲ್ಲಿ ಗಾಯನ ಸ್ಪರ್ಧೆ ನಡೆಯಲಿದೆ.

ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗಾನಸಿರಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here