ಕಬಕ ಶ್ರೀ ಅಡ್ಯಲಾಯ ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವದ ಪ್ರಯುಕ್ತ ಗೊನೆ ಮುಹೂರ್ತ

0

ಪುತ್ತೂರು: ಕಬಕ ಶ್ರೀ ಅಡ್ಯಲಾಯ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಡಿ.28ರಂದು ನಡೆಯಲಿರುವ ವಾರ್ಷಿಕ ನೇಮೋತ್ಸವದ ಪ್ರಯುಕ್ತ ಡಿ.21ರಂದು ಗೊನೆ ಮುಹೂರ್ತ ನಡೆಯಿತು.

ವೇ। ಮೂ। ಶ್ರೀಧರ ಭಟ್ ಕಬಕ ರವರು ವಿಧಿವಿಧಾನ ನೆರವೇರಿಸಿದರು. ದೈವಸ್ಥಾನದ ಅಧ್ಯಕ್ಷರಾದ ಸತೀಶ್ ರೈ ಡಿಂಬ್ರಿಗುತ್ತು, ಪ್ರಧಾನ ಕಾರ್ಯದರ್ಶಿಗಳಾದ ಲೋಕೇಶ್ ಶೆಟ್ಟಿ ಕಲ್ಲಂದಡ್ಕ, ಕೋಶಾಧಿಕಾರಿ ರಮೇಶ್ ಆಚಾರ್ಯ ಕೆದಿಮಾರ್, ಪ್ರಮುಖರಾದ ಜಿನ್ನಪ್ಪ ಪೂಜಾರಿ ಮುರ, ದಿನೇಶ್ ಕಬಕ, ನಾಗೇಶ್ ಕಬಕ ಬಾಬು ಗೌಡ ನೆಕ್ಕರೆ, ಜಯರಾಮ ನೆಕ್ಕರೆ, ರಮೇಶ್ ಅಡ್ಯಾಲು, ಕೃಷ್ಣ ಭಟ್ ಬೈಪದವು, ರವೀಂದ್ರ ಮೇಲಾಂಟ, ರಾಜ ವಿದ್ಯಾಪುರ ಮೊದಲಾದವರು ಉಪಸ್ಥಿತರಿದ್ದರು. ಡಿ.28ರಂದು ನಾಗದರ್ಶಣ, ಶ್ರೀ ಅಡ್ಯಲಾಯ ವೈದ್ಯನಾಥ, ಶ್ರೀ‌ ಅಣ್ಣಪ್ಪ ಪಂಜುರ್ಲಿ, ಶ್ರೀ ವ್ಯಾಘ್ರಚಾಮುಂಡಿ, ಶ್ರೀ ದೂಮಾವತಿ ದೈವಗಳ ನೇಮೋತ್ಸವ ನಡೆಯಲಿದೆ.

LEAVE A REPLY

Please enter your comment!
Please enter your name here