ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ ,ಪ್ರತಿಭಾ ದಿನೋತ್ಸವ,ಕ್ರಿಸ್ಮಸ್ ಆಚರಣೆ‌

0

ಉದನೆ:ಇಲ್ಲಿನ ಸೈಂಟ್ ಆಂಟನೀಸ್ ಹೈಸ್ಕೂಲ್ ಹಾಗೂ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ಇದರ ವಾರ್ಷಿಕ ಕ್ರೀಡಾಕೂಟ ಹಾಗೂ ಪ್ರತಿಭಾ ದಿನೋತ್ಸವ,ಕ್ರಿಸ್ಮಸ್ ಆಚರಣೆ ನಡೆಯಿತು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ ಇಲ್ಲಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್ ಪುತ್ತೂರು ಕ್ರೀಡಾಕೂಟವನ್ನು ಉದ್ಘಾಟಿಸಿ ,ಉದ್ಘಾಟನಾ ಭಾಷಣ ಮಾಡಿದರು.ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್ ಕ್ರೀಡಾ ಧ್ವಜಾರೋಹಣಗೈದರು.ಕ್ರೀಡಾ ಪಟುಗಳು ಪಥ ಸಂಚಲನ ನಡೆಸಿ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದರು.

ಪೂಜ್ಯ ಬಿಷಪ್ ಯಾಕೋಬ್ ಮಾರ್ ಅಂಥೋನೀಸ್ ,ನಿರ್ದೇಶಕರು ಸೈಂಟ್ ಆಂಟನೀಸ್ ಎಜುಕೇಶನ್ ಸೊಸೈಟಿ ಹೊನ್ನಾವರ,ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕನ್ನಡ ಮಾಧ್ಯಮ ಪ್ರೌಢ ಶಾಲಾ ಮುಖ್ಯಗುರು ಶ್ರೀಧರ ಗೌಡ ,ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಶಾಲೆಯ ಪ್ರಭಾರ ಮುಖ್ಯ ಗುರು ಯಶೋಧರ ವರದಿ ವಾಚಿಸಿದರು‌.ಮುಖ್ಯ ಅತಿಥಿಯಾಗಿ ಕೊಣಾಲು ಸರಕಾರಿ ಪೌಢ ಶಾಲೆಯ ಸಹಶಿಕ್ಷಕ ಶಾಂತಾರಾಮ ಓಡ್ಲ ಉಪಸ್ಥಿತರಿದ್ದರು. ರೆ.ಫಾ ಜೋಸೆಫ್ ಪಾಂಬಕ್ಕಲ್ ,ವಿಕಾರ್,ಸಂತ ಜೋಸೇಫರ ದೇವಾಲಯ ಅಡ್ಡಹೊಳೆ , ಕ್ರಿಸ್ಮಸ್ ಸಂದೇಶ ನೀಡಿದರು.


2022-23 ಎಸ್.ಎಸ್ .ಎಲ್ ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.ವೇದಿಕೆಯಲ್ಲಿ ಶಿರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಕಾರ್ತಿಕೇಯನ್, ಎರಡೂ ವಿಭಾಗದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಹಾಗೂ ಮೇಹಿ ಜಾರ್ಜ್,ಕೋಶಾಧಿಕಾರಿ ಸತೀಶ್ ಗೌಡ ,ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿಮ್ಸನ್ ಕೆ.ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ, ಪೂರ್ವ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಬಹುಮಾನ ವಿತರಿಸಲಾಯಿತು.‌ಬಳಿಕ ವಿದ್ಯಾರ್ಥಿಗಳಿಂದ ಕ್ರಿಸ್ತನ ಜನನ ,ಸಂದೇಶವನ್ನು ಸಾರುವ ನೃತ್ಯ ಪ್ರದರ್ಶನ ನಡೆಯಿತು.ಶಿಕ್ಷಕ ಶಿಕ್ಷಕೇತರವೃಂದ ,ಪೋಷಕರು ,ಪೂರ್ವ ವಿದ್ಯಾರ್ಥಿಗಳು ,ಊರವರು ಉಪಸ್ಥಿತರಿದ್ದರು,ಸಂಸ್ಥೆಯ ಸಂಚಾಲಕ ರೆ.ಫಾ ಹನಿ ಜೇಕಬ್ ಸ್ವಾಗತಿಸಿ,ಹಿರಿಯ ಶಿಕ್ಷಕ ಬಾಲಕೃಷ್ಣ ಗೌಡ ವಂದಿಸಿದರು.ಶಿಕ್ಷಕಿಯರಾದಎಲಿಝಬೆತ್ ಹಾಗೂ ನಯನ‌ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here