ಕೊಡಿಪ್ಪಾಡಿಯಲ್ಲಿ ಮನೆ ಪೈಂಟ್ ಕೆಲಸ ಮಾಡುತ್ತಿದ್ದ ಬನ್ನೂರು ಕರ್ಮಲ ನಿವಾಸಿ ಕಾರ್ಮಿಕ ಕುಸಿದು ಬಿದ್ದು ಮೃತ್ಯು

0

ಪುತ್ತೂರು: ಕೊಡಿಪ್ಪಾಡಿಯಲ್ಲಿ ಮನೆಯೊಂದರ ಪೈಂಟ್ ಕೆಲಸ ಮಾಡುತ್ತಿದ್ದ ಬನ್ನೂರು ಕರ್ಮಲ ನಿವಾಸಿ ಕುಸಿದು ಬಿದ್ದು ಮೃತಪಟ್ಟ ಘಟನೆ ಜ.8 ರಂದು ನಡೆದಿದೆ.
ಬನ್ನೂರು ಕರ್ಮಲ ನಿವಾಸಿ ರಾಘವ(55ವ) ಎಂಬವರು ಮೃತಪಟ್ಟವರು.

ಕೊಡಿಪ್ಪಾಡಿ ದೇವಸ್ಥಾನದ ಬಳಿ ಮನೆಯೊಂದರ ಪೈಂಟ್ ಕೆಲಸ ಮಾಡುತ್ತಿದ್ದ ಅವರು, ಈ ವೇಳೆ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದರು ಆಗಲೇ ಅವರು ಮೃತಪಟ್ಡಿದ್ದರೆಂದು ತಿಳಿದು ಬಂದಿದೆ. ಮೃತರು ಪತ್ನಿ ಮೂವರು ಪುತ್ರರನ್ನು ಅಗಲಿದ್ದಾರೆ‌.

LEAVE A REPLY

Please enter your comment!
Please enter your name here