ವೆನ್ಲಾಕ್ ಆಸ್ಪತ್ರೆಯಲ್ಲಿ ಕಾವು ಹೇಮನಾಥ ಶೆಟ್ಟಿ ಹುಟ್ಟು ಹಬ್ಬ ಆಚರಣೆ

0

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ನಾಯಕ ಕಾವು ಹೇಮನಾಥ ಶೆಟ್ಟಿಯವರ 59ನೇ ಹುಟ್ಟುಹಬ್ಬವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಅನ್ನದಾನ ಮಾಡುವ ಮೂಲಕ ಆಚರಿಸಿದರು.

ಕಾರ್ಯಕ್ರಮದ ಸಂಘಟಕ ಎನ್.ಎಸ್.ಯು.ಐ ಕರ್ನಾಟಕ ರಾಜ್ಯ ಉಪಾಧ್ಯಕ್ಷ, ಕಾವು ಹೇಮನಾಥ ಶೆಟ್ಟಿಯವರ ಆಪ್ತ ಫಾರೂಕ್ ಬಾಯಬೆಯವರ ನೇತೃತ್ವದಲ್ಲಿ 400 ಮಂದಿಗೆ ಅನ್ನದಾನ ಮಾಡಿದರು.ಕಾವು ಹೇಮನಾಥ ಶೆಟ್ಟಿ ಮಾತನಾಡಿ ಈ ಕಾರ್ಯ ಮನಸ್ಸಿಗೆ ಅತ್ಯಂತ ಸಂತೋಷವನ್ನು ತಂದಿದೆ ಎಂದರು.

ಕಾರ್ಯಕ್ರಮಕ್ಕೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕರೆಯ ಮುಖಾಂತರ ಶುಭ ಹಾರೈಸಿದರು. ಎಂ ಫ್ರೆಂಡ್ಸ್ ಕಾರುಣ್ಯ ಯೋಜನೆಯ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅನಿತಾ ಹೇಮನಾಥ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಗಿರೀಶ್ ಆಳ್ವ, ಪುತ್ತೂರು ನಗರಸಭಾ ಸದಸ್ಯ ರಾಬಿನ್ ತಾವರೊ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಶೀರ್ ಪರ್ಲಡ್ಕ, ಮಾಜಿ KSRTC ನಿರ್ದೇಶಕ ಇಸಾಕ್ ಸಾಲ್ಮರ, ಎಂ ಫ್ರೆಂಡ್ಸ್ ಟ್ರಸ್ಟಿ ಆಶಿಕ್ ಕುಕ್ಕಾಜೆ,ಉದ್ಯಮಿ ಷರೀಫ್ ಸಾಲ್ಮರ,ರವುಫ್ ಸಾಲ್ಮರ, ಮುಸ್ತಫಾ ಇಡಬೆಟ್ಟು, ಇಫಾಜ್ ಬನ್ನೂರು ಉಪಸ್ಥಿತರಿದ್ದರು.

ಕಳೆದ ಬಾರಿಯ 58ನೇ ವರ್ಷದ ಹುಟ್ಟು ಹಬ್ಬದ ಆಚರಣೆಯನ್ನು ಬಾಯಬೇಯವರು ಅಶ್ಮಿ ಕಂಫರ್ಟ್ ಸಭಾಂಗಣದಲ್ಲಿ 58 ಮಂದಿ ಹಿರಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ಸನ್ಮಾನ ಮಾಡುವ ಮೂಲಕ ಆಚರಿಸಿದ್ದರು.

LEAVE A REPLY

Please enter your comment!
Please enter your name here