ಪಡುಮಲೆ ಪಿಲಿಮಾಡ ಸನ್ನಿಧಿಯಲ್ಲಿ ನೇಮೋತ್ಸವ

0

ಬಡಗನ್ನೂರುಃ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಅಂಗವಾಗಿ  ಮೈಂದನಡ್ಕ ಪಿಲಿಮಾಡ ಸನ್ನಿಧಿಯಲ್ಲಿ ಹುಲಿಭೂತ ವಾರ್ಷಿಕ ನೇಮೋತ್ಸವವು ಪೂರ್ವ ಪದ್ಧತಿ ಪ್ರಕಾರ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಗಳ  ಶುಭಾಶ್ರೀರ್ವಾದಗಳೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ಜ.19 ನಡೆಯಿತು.

ಪಿಲಿಮಾಡ ಸನ್ನಿಧಿಯಿಂದ  ದೈವದ ಸವಾರಿ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ಸನ್ನಿಧಿಗೆ ಬಂದು ಶ್ರೀ ದೇವರ ಭೇಟಿ ಮಾಡಿ ಕರ್ತಲೆ ಕಾಣಿಕೆ ಸಲ್ಲಿಸಿ ಶ್ರೀ ದೇವರ ಗಂಧ ಪ್ರಸಾದವನ್ನು ಶ್ರೀ ದೈವ ಸ್ವೀಕರಿಸುವ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ  ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ರವಿರಾಜ ಶೆಟ್ಟಿ ಅಣಿಲೆ , ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು,ರವಿರಾಜ ರೈ ಸಜಂಕಾಡಿ,ಶ್ರೀಧರ ಎನ್ ನೇರ್ಲಪ್ಪಾಡಿ,ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರಾ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾರ್ದನ ಪೂಜಾರಿ ಪದಡ್ಕ, ಕೃಷ್ಣ ರೈ ಕುದ್ಕಾಡಿ ಗುಡ್ಡಪ್ಪ ರೈ ಸೇನೆರಮಜಲು, ರಾಮಣ್ಣ ಗೌಡ ಕರ್ಪುಡಿಕಾನ,ಮಹಾಲಿಂಗ ಪಾಟಾಳಿ ಕುದ್ಕಾಡಿ, ಮಣಿತ್ ರೈ ಕುದ್ಕಾಡಿ, ಸತೀಶ್ ರೈ ಮೈಂದನಡ್ಕ ಕೃಷ್ಣ ಮೂಲ್ಯ,ಸೂರಾಜ್ ರೈ ಮೈಂದನಡ್ಕ ಗಿರೀಶ್ ಗೌಡ ಕನ್ನಯ, ನಾರಾಯಣ ಪಾಟಾಳಿ ಮೈಂದನಡ್ಕ ಬಾಬು ಮೂಲ್ಯ ಮೈಂದನಡ್ಕ  ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here