ಕೆದಂಬಾಡಿ ಶ್ರೀ ರಾಮ ಮಂದಿರ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆಯಲ್ಲಿ ಧಾರ್ಮಿಕ ಕಾರ್ಯಕ್ರಮ

0

ಪುತ್ತೂರು:ಕೆದಂಬಾಡಿ ಶ್ರೀ ರಾಮ ಮಂದಿರ ಶ್ರೀಕ್ಷೇತ್ರ ಸನ್ಯಾಸಿಗುಡ್ಡೆಯಲ್ಲಿ ಜ.22ರಂದು ಅಯೋಧ್ಯೆಯಲ್ಲಿ ನಡೆದ ಪ್ರಾಣಪ್ರತಿಷ್ಠೆ ಪ್ರಯುಕ್ತ ವಿಶೇಷ ಭಜನಾ ಸೇವೆ, ರಾಮಜಪ ಮತ್ತು ಕಾರ್ಯಕ್ರಮದ ನೇರಪ್ರಸಾರ ವ್ಯವಸ್ಥೆ ನಡೆಸಿ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಕೆದಂಬಾಡಿ ಗ್ರಾಮದಿಂದ ಕರಸೇವಕರಾಗಿ ಭಾಗವಹಿಸಿದ ಶಿವರಾಮ ಗೌಡ ಇಡ್ಲಪ್ಪೆ, ಶೀನಪ್ಪ ಪೂಜಾರಿ, ರವಿ ಕುರಿಕ್ಕಾರ ರನ್ನು ಗೌರವಿಸಲಾಯಿತು.
ಮಹಾಬಲ ರೈ ,ಸುಂದರ್‌ ರಾಜ್‌ ರೈ ಬೆಂಗಳೂರು, ಕೆದಂಬಾಡಿ ಯುವರಂಗ ನಾನಾ ಕಾರ್ಯಕ್ರಮಕ್ಕೆ ನಾನಾ ವ್ಯವಸ್ಥೆಗಳನ್ನು ಮಾಡಿದ್ದು ಅವರನ್ನು ಗುರುತಿಸಲಾಯಿತು.
ಮಂದಿರದ ಆಡಳಿತ ಮಂಡಳಿ,ಸದಸ್ಯರು,ಭಜನಾ ಸಮಿತಿ, ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here