ಪಾಣಾಜೆ: ರಣಮಂಗಲ ಜಾತ್ರೋತ್ಸವ – ದರ್ಶನ ಬಲಿ

0

ಪಾಣಾಜೆ: ಇಲ್ಲಿನ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವರ್ಷಾವಧಿ ಉತ್ಸವ ಕ್ಷೇತ್ರದ ತಂತ್ರಿ ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿಗಳ ನೇತೃತ್ವದಲ್ಲಿ ನಡೆಯುತ್ತಿದ್ದು, ಜ. 24 ರಂದು  ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣದಲ್ಲಿ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು. ರಾತ್ರಿ ದೇವರಿಗೆ ರಂಗಪೂಜೆ ನಡೆದು, ದೈವಗಳ ಕೀರ್ವಾಳು ಭಂಡಾರ ಆರ್ಲಪದವು ದೈವಸ್ಥಾನಕ್ಕೆ ಬಂದು ಧ್ವಜಾರೋಹಣ ನಡೆಯಿತು. ಜ. 23 ರಂದು ರಾತ್ರಿ ಬಲಿ ಉತ್ಸವ, ಕಟ್ಟೆಪೂಜೆ ನೆರವೇರಿತು. 

ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ, ಊರ ಗುರಿಕ್ಕಾರ ಜಗನ್ಮೋಹನ ರೈ ಸೂರಂಬೈಲು, ಆಡಳಿತ ಸಮಿತಿ ಕಾರ್ಯದರ್ಶಿ ಶುಭಕರ ರೈ ಪಡ್ಯಂಬೆಟ್ಟು, ಸದಸ್ಯರು, ಜೀರ್ಣೊದ್ಧಾರ ಸಮಿತಿಯ ಪದಾಧಿಕಾರಿಗಳು, ಊರ ಪರವೂರ ಭಕ್ತಾಭಿಮಾನಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಇಂದು ಮಕರ ತೋರಣ ಏರಿಸುವುದು, ಪಾಲಕ್ಕಿ ಉತ್ಸವ, ತಂಬಿಲ
ನಾಳೆಯಿಂದ ಆರ್ಲಪದವು ಮಾಡದಲ್ಲಿ ಪೂಮಾಣಿ, ಕಿನ್ನಿಮಾಣಿ, ಹುಲಿಭೂತ ನೇಮೋತ್ಸವ

ಜಾತ್ರೋತ್ಸವ ಕಾರ್ಯಕ್ರಮಗಳು ‘ಸುದ್ದಿ ಲೈವ್’ ಚಾನೆಲ್ ನಲ್ಲಿ ನೇರ ಪ್ರಸಾರಗೊಂಡಿತು.

LEAVE A REPLY

Please enter your comment!
Please enter your name here