ಹೃದಯಾಘಾತದಿಂದ ನಿಧನರಾದ ಸುದ್ದಿ ಬಿಡುಗಡೆ ಜಾಹಿರಾತು ಪ್ರತಿನಿಧಿ ನವೀನ್ ಕಿಶೋರ್‌ರವರಿಗೆ ಪುತ್ತೂರು ಕಚೇರಿಯಲ್ಲಿ ಶ್ರದ್ಧಾಂಜಲಿ

0

ಪುತ್ತೂರು: ಹೃದಯಾಘಾತದಿಂದ ನಿಧನರಾದ ಸುದ್ದಿ ಬಿಡುಗಡೆ ಪತ್ರಿಕೆಯ ಜಾಹಿರಾತು ವಿಭಾಗದ ಪ್ರತಿನಿಧಿ, ಕುದ್ದುಪದವಿನ ನವೀನ್ ಕಿಶೋರ್‌ರವರಿಗೆ ಸುದ್ದಿ ಬಿಡುಗಡೆ ಪುತ್ತೂರು ಕಚೇರಿಯಲ್ಲಿ ಜ.30ರಂದು ಶ್ರದ್ಧಾಂಜಲಿ ಅರ್ಪಿಸಲಾಯಿತು.
ನುಡಿ ನಮನ ಸಲ್ಲಿಸಿದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದ ಮಾತನಾಡಿ, ಉತ್ತಮ ಅನುಭವಿಯಾಗಿದ್ದ ನವೀನ್ ಕಿಶೋರ್ ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿದವರು. ಸಂಸ್ಥೆಯ ಮೇಲೆ ಧನಾತ್ಮಕವಾಗಿ ಕೆಲಸ ಮಾಡಿದವರು. ಪತ್ರಿಕೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ ಕಚೇರಿಗಳಲ್ಲಿ ಜಾಹಿರಾತು ವಿಭಾಗದಲ್ಲಿ ಕೆಲಸ ನಿರ್ವಹಿಸಿದ್ದರು. ಜೀವನದ ಕೊನೇ ಕ್ಷಣದವರೆಗೆ ಉತ್ತಮವಾಗಿ ಕೆಲಸ ನಿರ್ವಹಿಸಿದ್ದರು. ಎಲ್ಲರೊಂದಿಗೆ ಉತ್ತಮ ಸಂಪರ್ಕ ಹಾಗೂ ಬಾಂಧವ್ಯ ಹೊಂದಿದ್ದವರು. ಬಹಳಷ್ಟು ಸಾವದಾನ ಹಾಗೂ ಮುಂಜಾಗ್ರತೆಯೊಂದಿಗೆ ಪ್ರಾಮಾಣಿಕ ಕೆಲಸ ನಿರ್ವಹಿಸಿದವರು. ಅವರಿಂದಾಗಿ ಪತ್ರಿಕೆಯ ಪ್ರಸರಣ ಹಾಗೂ ಜಾಹಿರಾತು ವೃದ್ಧಿಯಾಗಿದೆ. ಅಕಾಲಿಕವಾಗಿ ನಮ್ಮನ್ನು ಅಗಲಿದ ನವೀನ್ ಕಿಶೋರ್ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಹೇಳಿದರು.
ಸುದ್ದಿ ಬಿಡುಗಡೆಯ ಸಿಇಓ ಸೃಜನ್ ಊರುಬೈಲು, ಜಾಹಿರಾತು ವಿಭಾಗದ ಮುಖ್ಯಸ್ಥರಾದ ಮೋಹನ್ ಶೆಟ್ಟಿ, ಶೈಲಜಾ ಸುದೇಶ್, ಶ್ರೀಧರ್ ರೈ, ಪತ್ರಕರ್ತರಾದ ಲೋಕೇಶ್ ಬನ್ನೂರು ಹಾಗೂ ಶೇಖ್ ಜೈನುದ್ದೀನ್ ಮಾತನಾಡಿ ನುಡಿ ನಮನ ಸಲ್ಲಿಸಿದರು. ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here