ಫೆ.4: ಸ್ಪಂದನ ಸಹಾಯನಿಧಿ ಸೇವಾ ಟ್ರಸ್ಟ್‌ನಿಂದ ಆಹಾರ ಸಾಮಗ್ರಿ ವಿತರಣಾ ಕಾರ್ಯಕ್ರಮ

0

ಪುತ್ತೂರು: ಸ್ಪಂದನ ಸಹಾಯನಿಧಿ ಸೇವಾ ಟ್ರಸ್ಟ್ ಪುತ್ತೂರು ವತಿಯಿಂದ ಊರ ಪರವೂರ ದಾನಿಗಳ ಸಹಕಾರದಿಂದ 19ನೇ ಆಹಾರ ಸಾಮಗ್ರಿ ವಿತರಣಾ ಕಾರ್ಯಕ್ರಮ ನಡೆಯಲಿದೆ. ಕಿಡ್ನಿ ವೈಫಲ್ಯ, ಅಂಧತ್ವ, ಕ್ಯಾನ್ಸರ್, ಬುದ್ಧಿಮಾಂದ್ಯ ಇವುಗಳಿಂದ ಬಳಲುತ್ತಿರುವ ಹಾಗೂ ಆಯ್ದ ಬಡಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಣಾ ಕಾರ್ಯಕ್ರಮ ಫೆ.4ರಂದು ಬೆಳಿಗ್ಗೆ 10.30ರಿಂದ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿಗಾಗಿ 8296623958 ಸಂಪರ್ಕಿಸುವಂತೆ ಸ್ಪಂದನ ಸಹಾಯನಿಧಿ ಸೇವಾ ಟ್ರಸ್ಟ್‌ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here