ಜಿಡೆಕಲ್ಲು:ಜಲಸಿರಿ ಯೋಜನೆಯ ಗೇಟ್ ವಾಲ್ ತೆರೆದ ಸ್ಥಿತಿಯಲ್ಲಿ, ಅಪಾಯಕ್ಕೆ ಆಹ್ವಾನ-ಸುದ್ದಿ ವರದಿಗೆ ಫಲಶ್ರುತಿ

0

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು-ರಾಗಿದಕುಮೇರು ಸಂಪರ್ಕ ರಸ್ತೆಯ ಬದಿಯಲ್ಲಿ ಜಲಸಿರಿ ಯೋಜನೆಯ ಆರು ಅಡಿ ಆಳವುಳ್ಳ ನೀರಿನ ಗೇಟ್ ವಾಲ್ ಕಳೆದ ಮೂರು ತಿಂಗಳಿನಿಂದ ತೆರೆದ ಸ್ಥಿತಿಯಲ್ಲಿದ್ದು ಅಪಾಯದ ಮುನ್ಸೂಚನೆ ನೀಡುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಸ್ಪಂದಿಸುತ್ತಿಲ್ಲ ಎಂಬ ಕುರಿತು ‘ಸುದ್ದಿ’ ಪತ್ರಿಕೆ ವರದಿ ಪ್ರಕಟಿಸಿತ್ತು. 
ಆದರೆ ಇದೀಗ ಸಂಬಂಧಪಟ್ಟ ಇಲಾಖೆ ಎಚ್ಚೆತ್ತು ತೆರೆದ ಸ್ಥಿತಿಯಲ್ಲಿದ್ದ ಗೇಟ್ ವಾಲ್ ಅನ್ನು ಮುಚ್ಚಿಸಿರುತ್ತಾರೆ ಎಂದು ಸ್ಥಳೀಯರು ಸುದ್ದಿಗೆ ತಿಳಿಸಿದ್ದಾರೆ.
ವರದಿಯ ಮುಂಚಿತವಾಗಿ ತೆರೆದಿದ್ದ ಚಿತ್ರಣ

LEAVE A REPLY

Please enter your comment!
Please enter your name here