ಬೆಟ್ಟಂಪಾಡಿ ಕಾಲೇಜಿನ ಎನ್‌ಎಸ್ಎಸ್ ಶಿಬಿರ ಸಂಪನ್ನ

0

ಪುತ್ತೂರು: ಯುವಜನತೆಯು ಕೃಷಿಯಿಂದ ದೂರವಾಗುತ್ತಿರುವುದು ಚಿಂತಾದಾಯಕ ವಿಷಯವಾಗಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿ ಕೃಷಿಯಲ್ಲಿ ಪ್ರಗತಿಯನ್ನು ಕಾಣಬಹುದು. ಶಿಕ್ಷಣ ಪದ್ಧತಿಯಲ್ಲೂ ಕೃಷಿಯ ಮಹತ್ವವನ್ನು ತಿಳಿಸುವ ಕಾರ್ಯಗಳು ನಡೆಯಬೇಕಿದೆ ಎಂದು ಪದ್ಮಶ್ರೀ ಪುರಸ್ಕೃತ ಶ್ರೀ ಸತ್ಯನಾರಾಯಣ ಬೆಳೇರಿ ಇವರು ಹೇಳಿದರು.ಅವರು ಬಡಗನ್ನೂರು ದ  ಕ ಜಿ ಪಂ ಹಿ ಪ್ರಾ  ಶಾಲೆ ಕೊಯ್ಲ ಇಲ್ಲಿ ಜರುಗಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ  ನಿವೃತ್ತ ಸೈನಿಕ ವಿದ್ಯಾಧರ ಪಾಟಾಳಿ  ಇವರು ಮಾತನಾಡಿ ದೇಶ ರಕ್ಷಣೆಯ ಕಾರ್ಯವು ಪುಣ್ಯದಾಯಕವಾದ ಕಾರ್ಯವಾಗಿದೆ. ಯುವಜನತೆಯು ಮನಪೂರ್ವಕವಾಗಿ ದೇಶ ಸೇವೆಯ ಕಿಚ್ಚನ್ನು  ಹೆಚ್ಚಿಸಿಕೊಳ್ಳಬೇಕು ಎಂದರು. ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲೆ ಪಟ್ಟೆ ಇಲ್ಲಿನ ನಿವೃತ್ತ ಮುಖ್ಯಗುರು ಶಂಕರಿ ಮಾತನಾಡಿ ಪ್ರಾಯೋಗಿಕ ಕಲಿಕೆಯೇ  ನಿಜವಾದ ಶಿಕ್ಷಣ. ಸ್ವಯಂಸೇವಕರ ಮನಸ್ಸಿನ ಶಿಸ್ತಿಗೆ ಶಿಬಿರ ಸಹಕಾರಿ. ಶಾಲೆಯ ಸರ್ವದಿಕ್ಕುಗಳಲ್ಲಿಯೂ ಸಮಗ್ರ ಬದಲಾವಣೆಗಳು ಕಂಡಿವೆ ಎಂದರು.

ಪುತ್ತೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಮಾತನಾಡಿ ದೇಶಕ್ಕಾಗಿ ಜೀವಿಸುವುದು ಮತ್ತು ದೇಶಕ್ಕಾಗಿ ಮಡಿಯುವುದು ಶ್ರೇಷ್ಠದಾಯಕ ಕೆಲಸ. ಎಲ್ಲಾ ಧರ್ಮದ ಹಾಗೂ ಎಲ್ಲಾ ಜಾತಿಯ ಜನರು ಬೆರೆತು ಬಾಳುವುದನ್ನು ಎನ್ ಎಸ್ ಎಸ್ ಕಲಿಸಿಕೊಡುತ್ತದೆ ಎಂದರು. ಪುತ್ತೂರು ತಾಲೂಕು ಪಂಚಾಯತಿನ ನಿಕಟ ಪೂರ್ವ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ ಶಿಬಿರದ ಉತ್ತಮ ಕಾರ್ಯಗಳೊಂದಿಗೆ ಕಾಲೇಜಿನ ಎನ್ಎಸ್ಎಸ್ ಘಟಕವು ತನ್ನ ಸಾಧನೆಯ ಕಿರೀಟಕ್ಕೆ ಇನ್ನೊಂದು ಮುತ್ತನ್ನು ಜೋಡಿಸಿದೆ. ಜೀವನ ಮೌಲ್ಯಗಳ ಭಂಡಾರವೇ ಶಿಬಿರವಾಗಿದ್ದು , ಈ ಶಿಬಿರವು ಈ ಶಾಲೆಯ ವಿದ್ಯಾರ್ಥಿಗಳಿಗೆ, ಊರವರಿಗೆ, ಶಿಬಿರಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಹಲವಾರು ವಿಷಯಗಳನ್ನು ಕಲಿಸಿಕೊಟ್ಟಿದೆ ಎಂದರು.

 ಉದ್ಯಮಿ ಹಾಗು ಪುತ್ತೂರು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಸತೀಶ್ ರೈ ಕಟ್ಟಾವು ಮಾತನಾಡಿ ಶಿಬಿರಾರ್ಥಿಗಳ ಸಜ್ಜನತೆ ಹೆಮ್ಮೆ ತರುವಂತದ್ದು. ದುಶ್ಚಟಗಳಿಂದ ದೂರವಿದ್ದು ಬದುಕಿನ ಮಹತ್ವವನ್ನ ಅರಿತುಕೊಳ್ಳಿ ಎಂದು ಶಿಬಿರಾರ್ಥಿಗಳಿಗೆ ಹಿತನುಡಿದರು. ಶಾಲೆಯ ಪ್ರಧಾನ ಗುರುಪುಷ್ಪಾವತಿ ಎಂ ಬಿ ಮಾತನಾಡಿ ಶಿಬಿರಾರ್ಥಿಗಳು ನಡೆಸಿದ ಕೆಲಸ ಕಾರ್ಯಗಳು ಶ್ಲಾಘನೀಯ. ಇವರ ಒಡನಾಟದಿಂದ ನಾವೆಲ್ಲರೂ ಅವಿಸ್ಮರಣೀಯ ಅನುಭವಗಳನ್ನು ಪಡೆದುಕೊಂಡಿದ್ದೇವೆ ಎಂದರು.

ಸಮಾರೋಪ ಭಾಷಣದಲ್ಲಿ ಶಾಲೆಯ ಸಹಶಿಕ್ಷಕ ಗಿರೀಶ್ ಮಾತನಾಡಿ ಸರ್ವರ ಸ್ವಾರ್ಥ ರಹಿತ ಸೇವೆಯಿಂದ ಶಿಬಿರವು ಯಶಸ್ವಿಯಾಗಿದೆ. ಶಿಬಿರದ ಯಶಸ್ಸು ಶಾಲೆ, ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಸಾರ್ವಜನಿಕರ ಸಹಕಾರದಿಂದ ಸಾಧ್ಯವಾಯಿತು ಎಂದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಕಾಲೇಜಿನ ಹಿರಿಯ ಗ್ರಂಥಪಾಲಕ ರಾಮ ಕೆ , ಊರವರ, ಗಣ್ಯರ ಮಾತುಗಳಿಂದ ಶಿಬಿರದ ಸಾಧನೆಯು ತಿಳಿಯುತ್ತಿದೆ.ಇನ್ನು ಮುಂದೆಯೂ ಎನ್ಎಸ್ಎಸ್ ನಿಂದ ಇಂತಹ ಶ್ಲಾಘನೀಯ ಕಾರ್ಯಗಳು ಮೂಡಿಬರಲಿ ಎಂದು ಹಾರೈಸಿದರು. ಶಿಬಿರದ  ವರದಿಯನ್ನು ಘಟಕ 1ರ ನಾಯಕರುಗಳಾದ ರಕ್ಷಣ್  ರೈ ಮತ್ತು ಕೃತಿಕಾ ಪಿ ವಾಚಿಸಿದರು. ಶಿಬಿರಾರ್ಥಿಗಳಾದ ಮನೀಶ್, ಆದರ್ಶ ಎನ್, ಮಧುಶ್ರೀ ಕೆ ಎಸ್, ಅಂಕಿತ ಎ ಎಚ್  ಶಿಬಿರದ ಅನುಭವ ಮತ್ತು ಕಲಿಕೆಗಳನ್ನು ಹಂಚಿಕೊಂಡರು. ಸ್ಥಳೀಯರು ಕೂಡ ಅನಿಸಿಕೆಗಳನ್ನು ಹಂಚಿಕೊಂಡರು. ಕೃತಜ್ಞತಾ ವರದಿಯನ್ನು ಘಟಕ 2 ಇದರ ನಾಯಕರುಗಳಾದ ಪ್ರಜ್ವಲ್ ಆರ್ ಸಿ ಮತ್ತು ಅಂಕಿತಾ ಎ ಹೆಚ್ ವಾಚಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಕಟೀಲ್ ಲಾಜಿಸ್ಟಿಕ್ ಮಂಗಳೂರು ಇದರ ಮಾಲಕ ಜನಾರ್ಧನ ಪೂಜಾರಿ ಪದಡ್ಕ , ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸತೀಶ್ ನಾಯ್ಕ್, ಊರವರು, ಶಾಲಾ ವಿದ್ಯಾರ್ಥಿಗಳು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಿರಿಯ ಕೃಷಿಕ ಪದ್ಮಶ್ರೀ ಪುರಸ್ಕೃತ ಸತ್ಯನಾರಾಯಣ ಬೆಳೇರಿ, ನಿವೃತ್ತ ಸೈನಿಕ ವಿದ್ಯಾಧರ ಪಾಟಾಳಿ, ಕಾಲೇಜಿನ ಎನ್ಎಸ್ಎಸ್ ಸ್ವಯಂಸೇವಕಿ ರಾಷ್ಟ್ರಮಟ್ಟದ ಯೋಗಪಟು ಕುಮಾರಿ ಶಿಲ್ಪ, ಹಾಗೂ ರಾಜ್ಯಮಟ್ಟದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ ಪ್ರತೀಕ್ ಬಿ ಇವರನ್ನು ಸನ್ಮಾನಿಸಲಾಯಿತು.

ಶಿಬಿರಾಧಿಕಾರಿ ಡಾ. ಲಾಯ್ಡ್ ವಿಕ್ಕಿ ಡಿಸೋಜಾ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ. ಶಿಬಿರಾಧಿಕಾರಿ ಡಾ. ಯೋಗೀಶ್ ಎಲ್ ಎನ್ ವಂದಿಸಿ ಶಸೌಪರ್ಣಿಕ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here