ಮಾ. 6 ದರ್ಬೆತ್ತಡ್ಕ ಕೃಷ್ಣಪುರದಲ್ಲಿ ವಿಷ್ಣುಮೂರ್ತಿ ದೈವದ ಒತ್ತೆಕೋಲ

0

ಅರಿಯಡ್ಕ: ಅರಿಯಡ್ಕ ಗ್ರಾಮದ ದರ್ಬೆತ್ತಡ್ಕ – ಕೃಷ್ಣಪುರದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.6,7 ರಂದು ಸಾರ್ವಜನಿಕ ಒತ್ತೆಕೋಲ ಸಮಿತಿ, ಕೃಷ್ಣಪುರ -ದರ್ಬೆತ್ತಡ್ಕ ಇದರ ವತಿಯಿಂದ ನಡೆಯಲಿದೆ. ಪ್ರತಿ ವರ್ಷ ಮಾ. 13 ಮತ್ತು 14ರಂದು ನಡೆಯುತ್ತಿದ್ದ ಒತ್ತೆಕೋಲವು ಇನ್ನು ಮುಂದೆ ಪ್ರತೀ ವರ್ಷ ಮಾ.6 ಮತ್ತು 7ರಂದು ನಡೆಯಲಿದೆ.

ಭಕ್ತಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಮಿತಿಯ ಪ್ರಕಟಣೆ ತಿಳಿಸಿದೆ.ಕಾರ್ಯಕ್ರಮ: ಮಾ.6 ರಂದು ಬೆ. 7.30ಕ್ಕೆ ಗಣಪತಿ ಹೋಮ (ದರ್ಬೆತ್ತಡ್ಕ ಕೃಷ್ಣಪುರದಲ್ಲಿ)ಸಂಜೆ 6.30ಕ್ಕೆ ಪೊನ್ನೆತ್ತಳ್ಕ ದೈವಸ್ಥಾನದಿಂದ ಭಂಡಾರ ತೆಗೆಯುವುದು, ರಾತ್ರಿ 8ಕ್ಕೆ ಮೇಲೇರಿಗೆ ಅಗ್ನಿಸ್ಪರ್ಶ,ರಾತ್ರಿ 8.30ಕ್ಕೆ ಭಜನೆ: ಶ್ರೀ ಅಯ್ಯಪ್ಪ ಭಜನಾ ಮಂಡಳಿ ದರ್ಬೆತ್ತಡ್ಕ ಮತ್ತು ಶ್ರೀ ಮಹಮ್ಮಾಯಿ ಮರಾಠಿ ಸಮಾಜ ಸೇವಾ ಸಂಘ, ಮುಡಾಲಮೂಲೆ- ಇವರಿಂದ, ರಾತ್ರಿ 9ರಿಂದ ಅನ್ನಸಂತರ್ಪಣೆ,ರಾತ್ರಿ 11ಕ್ಕೆ ಕುಳಿಚ್ಚಾಟ, ರಾತ್ರಿ 1ಕ್ಕೆ ಅಭಿನಯ ಕಲಾವಿದರು ಪುತ್ತೂರು ಇವರಿಂದ ತುಳು ನಿಗೂಢಮಯ ನಾಟಕ ಮಣ್ಣ್ ಕಾರ್ನಿಕದ? .ಮಾ.೦7 ರಂದು ಪ್ರಾತಃಕಾಲಕ್ಕೆ ಅಗ್ನಿಸೇವೆ,5.30ಕ್ಕೆ ಮಾರಿಕಳ,ಬೆಳಿಗ್ಗೆ 7.30ಕ್ಕೆ ಪ್ರಸಾದ ವಿತರಣೆ 8 ಕ್ಕೆ ಗುಳಿಗ ಕೋಲ ನಡೆಯಲಿದೆ.

LEAVE A REPLY

Please enter your comment!
Please enter your name here