ಸುಳ್ಯಪದವು ಶಬರಿನಗರ ಶ್ರೀ ಸ್ವಾಮಿ ಕೊರಗಜ್ಜ ಹಾಗೂ ಗುಳಿಗ ದೈವಗಳ ನೇಮೋತ್ಸವ

0

ಬಡಗನ್ನೂರುಃ  ಸ್ವಾಮಿ ಕೊರಗಜ್ಜ ಸೇವಾ ಸಮಿತಿ, ಶಬರಿನಗರ ಸುಳ್ಯಪದವು ಇದರ ವಾರ್ಷಿಕ  ಶ್ರೀ ದೈವಗಳ ನೇಮೋತ್ಸವವು ಮಾ.10 ಮತ್ತು 11 ರಂದು  ಶ್ರೀ ಕ್ಷೇತ್ರದ ಸಾನಿಧ್ಯದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಿತು.ಮಾ 10 ರಂದು ಬೆಳಗ್ಗೆ  ಗಣಪತಿ ಹೋಮ, ಬಳಿಕ  ಭಜನಾ ಕಾರ್ಯಕ್ರಮ ನಡೆಯಿತು.

ಭಜನಾ ಕಾರ್ಯಕ್ರಮ 
ಸ್ವಾಮಿ ಕೊರಗಜ್ಜ ಬಾಲ ಭಜನಾ ಸಂಘ ಶಬರಿನಗರ ಸುಳ್ಯಪದವು,  ಶ್ರೀ ಮಹಾಲಕ್ಷ್ಮೀ ಮಹಿಳಾ ಭಜನಾ ಮಂಡಳಿ ಸುಳ್ಯಪದವು, ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ಸುಳ್ಯಪದವು, ಶ್ರೀ ಮಹಾವಿಷ್ಣು ಭಜನಾ ಸಂಘ ಸುಳ್ಯಪದವು ,ಶ್ರೀ ಅಯ್ಯಪ್ಪ ಭಜನಾ ಮಂದಿರ ಸುಳ್ಯಪದವು ತಂಡದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

 ಕುಣಿತ ಭಜನೆ ;-ಕುಣಿತ ಭಜನಾ ಕಾರ್ಯಕ್ರಮದಲ್ಲಿ ಸರ್ವೋದಯ ವಿದ್ಯಾಸಂಸ್ಥೆ ಸುಳ್ಯಪದವು ಇದರ ವಿದ್ಯಾರ್ಥಿನಿಯರಿಂದ ಮತ್ತು  ಶ್ರೀ ಮಹಾವಿಷ್ಣು ಮಕ್ಕಳ ಕುಣಿತ ಭಜನಾ ಮಂಡಳಿ ಕನ್ನಡ ಹಾಗೂ ಶ್ರೀ ಅಂಬಾಭವಾನಿ ಭಜನಾ ಮಂಡಳಿ ಪಾದೆಗದ್ದೆ ಇದರ ಸದಸ್ಯರಿಂದ  ಕಣಿತ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಸಂಜೆ ಗಂ 4.30 ರಿಂದ ಗುಳಿಗ ದೈವದ ನೇಮೋತ್ಸವ, ರಾತ್ರಿ ಗಂ 8 ಕ್ಕೆ  ಶ್ರೀ ದೈವದ ಭಂಡಾರ ತೆಗೆದು, ಬಳಿಕ 8ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ರಾತ್ರಿ ಗಂ 11 ರಿಂದ ಶ್ರೀ ಕೊರಗ ತನಿಯ ದೈವದ ನೇಮೋತ್ಸವ ಮಾ.11 ರಂದು ಪ್ರಾತಃಕಾಲ ಪ್ರಸಾದ ವಿತರಣೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 7.30 ರಿಂದ ಸ್ವಾಮಿ ಕೊರಗಜ್ಜ  ಬಾಲ ಯಕ್ಷಗಾನ ಸಂಘ ಶಏರಿನಗರ ಸುಳ್ಯಪದವು ಇವರಿಂದ ಶ್ರೀದೇವಿ ಲೀಲಾಮೃತಂ ಯಕ್ಷಗಾನ ಬಯಲಾಟ ನಡೆಯಿತು..

ಗೌರವಾರ್ಪಣೆ-ವಾರ್ಷಿಕ ನೇಮೋತ್ಸವ ಅಂಗವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ  ಡಾ| ದಾಮೋದರ  ಪೂಜಾರಿ ಮರದಮೂಲೆ (ಯು.ಎಸ್.ಎ.),  ಬೆಂಗಳೂರು  ಇಸ್ರೋ ಸಂಸ್ಥೆಯ ವಿಜ್ಞಾನಿ ಸತೀಶ್ ಮರದಮೂಲೆ , ಪುತ್ತೂರು    ಕೆ.ಎಸ್.ಆರ್.ಟಿ.ಸಿ. ಅಪಘಾತ ರಹಿತ ಹಿರಿಯ ಚಾಲಕ  ಅಣ್ಣು ನಾಯ್ಕ ನೆಲ್ಯಾಡಿ,  ಪುತ್ತೂರು ಕೆ.ಎಸ್.ಆರ್.ಟಿ.ಪಿ. ಟಿ.ಸಿ ಸಾಂತಪ್ಪ ಪೂಜಾರಿ ಕಡಮಗದ್ದೆ ಕಾಯರ್‌ಪದವು ಹಾಗೂ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಶಿಕ್ಷಕರು ಯಕ್ಷಗಾನ ಗುರುಗಳು ಅದ ಚಂದ್ರಶೇಖರ ಮರದಮೂಲೆ   ಇವರುಗಳನ್ನು ಶಾಲು ಹೊದಿಸಿ ಹಾರ ಹಾಕಿ ಪೇಟ ತೊಡಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಗೌರವಾರ್ಪಣೆ ಮಾಡಲಾಯಿತು.

 ಕಾರ್ಯಕ್ರಮದಲ್ಲಿ  ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ ಶಬರಿನಗರ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮರದಮೂಲೆ, ಉಪಾಧ್ಯಕ್ಷ ಸದಾನಂದ ರೈ ಬೋಳಂಕೂಡ್ಲು, ಕೋಶಾಧಿಕಾರಿ ಭಾಸ್ಕರ ಹೆಗ್ಗಡೆ ಶಬರಿನಗರ, ಜತೆ ಕಾರ್ಯದರ್ಶಿ ವಿನಾಯ ಕುಮಾರ್ ದೇವಸ್ಯ  ,ಪೂಜಾಕರ್ಮಿ ಮಾಧವ ಸಾಲಿಯಾನ್  ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು, ಬಡಗನ್ನೂರು ಗ್ರಾ. ಪಂ  ಅಧ್ಯಕ್ಷೆ ಪುಷ್ಪಲತಾ ದೇವಕಜೆ,  ಮಾಜಿ ಅಧ್ಯಕ್ಷೆ ಶ್ರೀಮತಿ ಕೆ, ಸದಸ್ಯರಾದ ಸಂತೋಷ್ ಆಳ್ವ ಗಿರಿಮನೆ, ವೆಂಕಟೇಶ್ ಕನ್ನಡ್ಕ,  ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು  ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾಧಿಗಳು ಭಾಗವಹಿಸಿ ಅನ್ನಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here