ಅಳಿಕೆ:ಕಾಂಗ್ರೆಸ್‌ ನ ಗೋಪಾಲ ಬೀಮಾವರ ಸಹಿತ ಹಲವು ಮಂದಿ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

0

ಪುತ್ತೂರು: ಅಳಿಕೆ ಗ್ರಾಮದ ಕಾಂಗ್ರೆಸಿನ ಸಕ್ರೀಯ ಕಾರ್ಯಕರ್ತ ಗೋಪಾಲ ಬೀಮಾವರ ಸಹಿತ ಹಲವಾರು ಮಂದಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಈ ದೇಶಕ್ಕೆ ಮೋದಿ ಅನಿವಾರ್ಯ ಮತ್ತು ಸ್ಥಳೀಯ ನಾಯಕರ ವರ್ತನೆಗೆ ಬೇಸತ್ತು ನಾವು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದೇವೆ ಎಂದ ಅವರು ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವಾರವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು.

ಈ ಸಂದರ್ಭದಲ್ಲಿ ಪುತ್ತೂರು ಬಿಜೆಪಿ ಚುನಾವಣಾ ಉಸ್ತುವಾರಿ ಸುಲೋಚನ ಜಿ.ಕೆ.ಭಟ್, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಉಪಾಧ್ಯಕ್ಷರು ಹಾಗೂ ಪುಣಚ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಹರಿಪ್ರಸಾದ್ ಯಾದವ್, ಚುನಾವಣಾ ನಿರ್ವಹಣಾ ಸಮಿತಿ ಸಹ ಸಂಚಾಲಕರಾದ ಉಮೇಶ್ ಕೋಡಿಬೈಲ್, ಪುಣಚ ಮಹಾಶಕ್ತೀ ಕೇಂದ್ರ ಚುನಾವಣ ಪ್ರಭಾರಿ ಸಹಜ್ ರೈ ಬಳಜ್ಜ, ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜ್ರೆಮಾರ್, ಶಕ್ತಿ ಕೇಂದ್ರ ಸಂಚಾಲಕ ಸದಾನಂದ ಶೆಟ್ಟಿ, ಪಕ್ಷದ ಪ್ರಮುಖರಾದ ಕಾನ ಈಶ್ವರ ಭಟ್, ಬೂತ್ ಅಧ್ಯಕ್ವ ಸೌಜೀವ ಗೌಡ, ಸದಾಶಿವ ಅಳಿಕೆ, ವಧ್ವ ಈಶ್ವರ ಭಟ್, ಉದಯ್ ಕುಮಾರ್, ರಿತೇಶ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here