ಇಚ್ಲಂಪಾಡಿ ನೇರ್ಲ ಶಾಲಾ ಗೇರು, ತೆಂಗಿನ ಮರ ಬೆಂಕಿಗಾಹುತಿ

0

ನೆಲ್ಯಾಡಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಬೆಂಕಿ ಅನಾಹುತದಿಂದ ಗೇರು ಹಾಗೂ ತೆಂಗಿನ ಮರಗಳು ಸುಟ್ಟುಹೋದ ಘಟನೆ ಇಚ್ಲಂಪಾಡಿಯ ನೇರ್ಲದಲ್ಲಿ ಎ.27ರಂದು ನಡೆದಿದೆ.
ಇಚ್ಲಂಪಾಡಿಯ ನೇರ್ಲ ಸರಕಾರಿ ಹಿ.ಪ್ರಾ.ಶಾಲೆಯ ತೋಟದ ಮೂಲಕ ಹಾದುಹೋಗಿದ್ದ ವಿದ್ಯುತ್ ಲೈನ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಸಂಭವಿಸಿದೆ. ಇದರಿಂದಾಗಿ ಶಾಲೆಯ ತೋಟದಲ್ಲಿದ್ದ ಸುಮಾರು 25 ಗೇರು ಬೀಜದ ಮರಗಳು, ನಾಲ್ಕು ತೆಂಗಿನ ಮರಗಳು ಸುಟ್ಟುಹೋಗಿವೆ ಎಂದು ವರದಿಯಾಗಿದೆ. ಸ್ಥಳೀಯರು ಹರಸಾಹಸ ಪಟ್ಟು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

LEAVE A REPLY

Please enter your comment!
Please enter your name here