ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಗೆ 66 ಸಾವಿರ ಮತಗಳ ಗೆಲುವು- ನಫೀಸಾ ಪೆರುವಾಯಿ

0

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದ.ಕ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರು ಸುಮಾರು 66 ಸಾವಿರ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ. ರಾಜ್ಯ ಸರಕಾರದ ಜನಪರವಾದ ಗ್ಯಾರಂಟಿ ಯೋಜನೆಯ ಫಲವಾಗಿ ಹೆಚ್ಚಿನ ಮಹಿಳೆಯರು ಈ ಬಾರಿ ಕಾಂಗ್ರೆಸ್‌ಗೆ ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ ಸರಕಾರ ಬಂದ ಬಳಿಕ ಜನರು ನೆಮ್ಮದಿಯ ಜೀವನ ನಡೆಸುತ್ತಿದ್ದು ಕೇಂದ್ರದ ಬಿಜೆಪಿ ಸರಕಾರ ದುರಾಡಳಿತದ ವಿರುದ್ಧವಾಗಿ ಜನತೆ ಈ ಬಾರಿ ಮತ ಚಲಾಯಿಸಿದ್ದು ದ.ಕ ಜಿಲ್ಲೆಯಲ್ಲೂ ಜನತೆ ಬದಲಾವಣೆ ಬಯಸಿ ಪದ್ಮರಾಜ್ ಪೂಜಾರಿಯವರಿಗೆ ಮತ ಚಲಾಯಿಸಿದ್ದಾರೆ. ಹಾಗಾಗಿ ಪದ್ಮರಾಜ್ ಪೂಜಾರಿ ಜಯಗಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
-ನಫೀಸಾ ಪೆರುವಾಯಿ,
ಅಧ್ಯಕ್ಷರು ಪೆರುವಾಯಿ. ಗ್ರಾಮ ಪಂಚಾಯತ್

LEAVE A REPLY

Please enter your comment!
Please enter your name here