ಮೊಗ್ರು: ಅನಾರೋಗ್ಯದಿಂದ ಯು.ಕರುಣಾಕರ ಗೌಡ ಮೃತ್ಯು

0

ಉಪ್ಪಿನಂಗಡಿ: ಅನಾರೋಗ್ಯದಿಂದ ಯುವಕನೋರ್ವ ಮೃತಪಟ್ಟ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದಲ್ಲಿ ನಡೆದಿದೆ.
ಮೊಗ್ರು ಗ್ರಾಮದ ಉಳಿಯ ನಿವಾಸಿ ಕೊರಗಪ್ಪ ಗೌಡ ಅವರ ಪುತ್ರ ಯು.ಕರುಣಾಕರ ಗೌಡ(34ವ.)ಮೃತಪಟ್ಟವರಾಗಿದ್ದಾರೆ.

ಕರುಣಾಕರ ಗೌಡ ಅವರು ಮಂಗಳೂರಿನಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ಮೂರ‍್ನಾಲ್ಕು ದಿನಗಳಿಗೊಮ್ಮೆ ಮನೆಗೆ ಬಂದು ಸ್ವಲ್ಪ ದಿನ ಮನೆಯಲ್ಲಿದ್ದು ಬಳಿಕ ಚಾಲಕ ಕೆಲಸಕ್ಕೆ ಹೋಗುತ್ತಿದ್ದರು. ಅದರಂತೆ ಮೇ 1ರಂದು ರಾತ್ರಿ ಮನೆಗೆ ಬಂದು ರಾತ್ರಿ ಊಟ ಮಾಡಿ ಮಲಗಿದ್ದವರು ಮೇ .2ರಂದು ಬೆಳಿಗ್ಗೆ ಎದ್ದು ವಾಂತಿ ಮಾಡಲು ಪ್ರಾರಂಭಿಸಿದ್ದರು. ಮನೆಯವರು ಸಮೀಪದ ವೈದ್ಯರಿಂದ ಮದ್ದು ತಂದು ನೀಡಿದ್ದರೂ ಕರುಣಾಕರ ಗೌಡರವರಿಗೆ ನಿತ್ರಾಣವಾಗಿದ್ದು ಮಧ್ಯಾಹ್ನ ಸಹೋದರನ ಕೈ ಹಿಡಿದುಕೊಂಡು ಬಾತ್‌ರೂಮ್‌ಗೆ ಹೋಗುತ್ತಿದ್ದ ವೇಳೆ ಕುಸಿದು ಬಿದ್ದರು. ಕೂಡಲೇ ಖಾಸಗಿ ವಾಹನವೊಂದರಲ್ಲಿ ಚಿಕಿತ್ಸೆಯ ಬಗ್ಗೆ ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಹೋಗಲು ಬರುತ್ತಿದ್ದ ವೇಳೆ ದಾರಿಮಧ್ಯೆ ಕರುಣಾಕರ ಗೌಡ ಅವರು ಕಣ್ಣು ಮುಚ್ಚಿ ಮಾತನಾಡದೇ ಇದ್ದ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿನ ವೈದ್ಯರು ಪರೀಕ್ಷಿಸಿದ ವೇಳೆ ಕರುಣಾಕರ ಗೌಡರವರು ಮೃತಪಟ್ಟಿದ್ದರು ಎಂದು ವರದಿಯಾಗಿದೆ. ಘಟನೆ ಕುರಿತಂತೆ ಮೃತ ಕರುಣಾಕರ ಗೌಡ ಅವರ ಸಹೋದರ ಯು.ಶಶಿಧರ ಗೌಡ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

LEAVE A REPLY

Please enter your comment!
Please enter your name here