ಬನ್ನೂರು: ಮನೆಯಲ್ಲಿದ್ದ ಒಬ್ಬಂಟಿ ಮಹಿಳೆ ಕುಸಿದು ಬಿದ್ದು ಮೃತ್ಯು

0

ಪುತ್ತೂರು: ಬನ್ನೂರು ಗ್ರಾಮದ ಆನೆಮಜಲಿನಲ್ಲಿ ಒಬ್ಬಂಟಿಯಾಗಿ ವಾಸ್ತವ್ಯ ಹೊಂದಿದ್ದ ಮಹಿಳೆಯೊಬ್ಬರು ಮನೆಯೊಳಗೆ ಕುಸಿದು ಬಿದ್ದು ಮೃತಪಟ್ಟರುವ ಬಗ್ಗೆ ಮೇ.4ರಂದು ಬೆಳಕಿಗೆ ಬಂದಿದೆ.
ಕರ್ಮಲ ನಿವಾಸಿ ರಘುರಾಮ ಭಟ್ ಎಂಬವರ ತಾಯಿಯ ತಮ್ಮನ ಹೆಂಡತಿ (ಅತ್ತೆ) ಮಾಲತಿ ಅವರು ಮೃತಪಟ್ಟವರು. ಅವರು ಆನೆಮಜಲಿನ ಮನೆಯಲ್ಲಿ ಒಬ್ಬಂಟಿಯಾಗಿ ವಾಸ್ತವ್ಯ ಹೊಂದಿದ್ದರು. ಮೇ.4ರಂದು ಮಾಲತಿಯವರು ಮನೆಯ ಬಾಗಿಲು ತೆರೆಯದಿರುವುದನ್ನು ಗಮನಿಸಿದ ಸ್ಥಳೀಯ ಥಾಮಸ್ ಎಂಬವರು ಕಿಟಕಿಯಿಂದ ನೋಡಿದಾಗ ಕುಸಿತು ಬಿದ್ದ ಸ್ಥಿತಿಯಲ್ಲಿದ್ದ ಮಾಲತಿ ಅವರನ್ನು ಕೂಗಿದರೂ ಯಾವುದೇ ಪ್ರತಿಕ್ರಿಯೆ ಇಲ್ಲದಾಗ ಥಾಮಸ್ ಅವರು ರಘುರಾಮ ಭಟ್ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಮಾಲತಿಯವರು ಅನಾರೋಗ್ಯದಿಂದ ಅಥವಾ ಇನ್ಯಾವುದೋ ಕಾಯಿಲೆಯಿಂದ ಕುಸಿದು ಬಿದ್ದು ಮೃತಪಟ್ಟಿರಬಹುದೆಂದು ಮೃತರ ಸಂಬಂಧಿಕ ರಘುರಾಮ ಭಟ್ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here