ಎಲ್.ಐ.ಸಿ ಪುತ್ತೂರು ಶಾಖೆಯ ಮುಖ್ಯ ಪ್ರಬಂಧಕರಾಗಿ ಎಚ್.ಉಜ್ವಲ್

0

ಪುತ್ತೂರು: ಭಾರತೀಯ ಜೀವ ವಿಮಾ ನಿಗಮ ಪುತ್ತೂರು ಶಾಖೆಯ ಮುಖ್ಯ ಪ್ರಬಂಧಕರಾಗಿ ಎಚ್ ಉಜ್ವಲ್ ಅವರು ಮೇ.2ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮೂಲತಃ ಕೇರಳದ ತಿರುವನಂತಪುರಂ ನಿವಾಸಿಯಾಗಿರುವ ಇವರು ನಿಗಮದ ತಿರುವನಂತಪುರಂ ವಿಭಾಗದ ನೆಯ್ಯಾಟಿಂಕರ ಶಾಖೆ ಮತ್ತು ಸಿ.ಬಿ.ಓ-2 ತಿರುವನಂತಪುರಂ ಶಾಖೆಯಲ್ಲಿ ಹಿರಿಯ ಶಾಖಾ ಪ್ರಬಂಧಕರಾಗಿ ಸೇವೆ ಸಲ್ಲಿಸಿದ್ದರು. ಇವರು ಸುಮಾರು 30 ವರ್ಷಗಳಿಂದ ನಿಗಮದ ಆಡಳಿತ ಮತ್ತು ಇನ್ಸೂರೆನ್ಸ್ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ.

LEAVE A REPLY

Please enter your comment!
Please enter your name here