ಶಾಂತಾ ಪುತ್ತೂರುರವರಿಗೆ ಸೌರಭ ರತ್ನ ರಾಜ್ಯ ಪ್ರಶಸ್ತಿ

0

ಪುತ್ತೂರು: ಕಥಾಬಿಂದು ಪ್ರಕಾಶನ ಮಂಗಳೂರು ಪಿ.ವಿ.ಪ್ರದೀಪ್ ಕುಮಾರ್ ಸಾರಥ್ಯ ದಲ್ಲಿ ಸಾಹಿತ್ಯ ಸಂಭ್ರಮ 2024 ಭಾರತಿ ಶಾಲೆ ಮುಡಿಪುವಿನಲ್ಲಿ ಮೇ.26ರಂದು ನಡೆಯಿತು.ಈ ಸಂದರ್ಭದಲ್ಲಿ ಸರಕಾರಿ ಪ್ರೌಢಶಾಲೆ ಕಬಕದ ಶಿಕ್ಷಕಿ ಬೊಳುವಾರು ನಿವಾಸಿ ಶಾಂತಾ ಪುತ್ತೂರುರವರಿಗೆ ಸೌರಭ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪರು ಕಾರ್ಯಕ್ರಮ ಉದ್ಘಾಟಿಸಿದರು.ಕ.ಸಾ.ಪ.ಬೆಂಗಳೂರಿನ ಮಾಜಿ ರಾಜ್ಯಾಧ್ಯಕ್ಷ ಡಾ॥ ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಬಿ.ಸತ್ಯವತಿ ಎಸ್ ಭಟ್, ಕಥಾಬಿಂದು ಪ್ರಕಾಶನದ ಪಿ.ವಿ.ಪ್ರದೀಪ್ ಕುಮಾರ್,ಗೋವಿಂದದಾಸ್ ಕಾಲೇಜು ಸುರತ್ಕಲ್ ನ ಪ್ರಾಂಶುಪಾಲ ಪ್ರೊ.ವಿ.ಕೃಷ್ಣಮೂರ್ತಿ , ಹಿರಿಯ ಸಾಹಿತಿ ಜಯಾನಂದ ಪೆರಾಜೆ,ಶ್ರೀ.ಎನ್.ಸುಬ್ರಾಯ ಭಟ್ ಮಂಗಳೂರು,ಶ್ರೀ ಭಾರತಿ ಶಾಲೆ ಮುಡಿಪುವಿನ ಸಂಚಾಲಕ ಕೊಡಕ್ಕಲ್ಲು ಸುಬ್ರಹ್ಮಣ್ಯ ಭಟ್ ,ನಿವೃತ್ತ ಉಪನ್ಯಾಸಕರು ಮೈಸೂರಿನ ನಾಟಕ ಭಾರ್ಗವ ಕೆಂಪರಾಜು ,ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಅನಂತ ಎಮ್.ತಾಮನ್ಕರ್, ಉಪಸ್ಥಿತರಿದ್ದರು.ನಂತರ ಶಿಕ್ಷಣ ತಜ್ಞರಾದ .ಪಿ.ವಿ.ಕುಳಮರ್ವ ರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು.ಕವಯಿತ್ರಿ ಅಪೂರ್ವ ಕಾರಂತ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here