ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ದೇವಳದ ವಠಾರದ ವತಿಯಿಂದ ದೇವಳದ ವಠಾರದಲ್ಲಿ ವರ್ಷಂಪ್ರತಿ ಪೂಜಿಸಲ್ಪಡುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪೂರ್ವ ತಯಾರಿಗೂ ಮುಂದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಗಣಪತಿ ಗುಡಿಯಲ್ಲಿ ಸೇವಾರ್ಥವಾಗಿ ನಡೆಸುವ ರಂಗಪೂಜೆಯನ್ನು ಮೇ.29 ರಂದು ಸಮಿತಿ ಗೌರವಾಧ್ಯಕ್ಷ ಡಾ. ಎಂ.ಕೆ.ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ನೆರವೇರಿಸಲಾಯಿತು.
![](https://puttur.suddinews.com/wp-content/uploads/2024/05/rangapooje-1-2.jpg)
ಗಣಪತಿ ಗುಡಿಯ ಮುಂದೆ ರಂಗಪೂಜೆಯನ್ನು ಅರ್ಚಕ ವೆ ಮೂ ಉದಯ ಭಟ್ ಅವರು ನೆರವೇರಿಸಿದರು. ಈ ಸಂದರ್ಭ ಸಮಿತಿ ಅಧ್ಯಕ್ಷ ಸುಜೀಂದ್ರ ಪ್ರಭು, ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು, ನೀಲಂತ್ ಬೊಳುವಾರು, ಶ್ರೀನಿವಾಸ್, ಚಂದ್ರಶೇಖರ್, ವಿಶ್ವನಾಥ ಗೌಡ, ವಾಟೆಡ್ಕ ಕೃಷ್ಣ ಭಟ್, ಹೆಚ್ ಉದಯ, ಗೋಪಾಲ ನಾಯ್ಕ್, ಪೂವಪ್ಪ, ಶಿಕ್ಷಕ ಶ್ರೀಕಾಂತ್, ಮಲ್ಲೇಶ್ ಆಚಾರ್ಯ, ಮೋಹನ, ಭಾಮಿ ಜಗದೀಶ್ ಶೆಣೈ, ಭಾಮಿ ಅಶೋಕ್ ಶೆಣೈ ಸಹಿತ ಹಲವಾರು ಮಂದಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಸಮಿತಿ ಸದಸ್ಯ ರೂಪೇಶ್ ದಂಪತಿ ಪೂಜೆಯಲ್ಲಿ ಪಾಲ್ಗೊಂಡರು.