ಬೆಟ್ಟಂಪಾಡಿ ನಿಡ್ಪಳ್ಳಿ ಬಿ.ಜೆ.ಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

0

ನಿಡ್ಪಳ್ಳಿ;ದ.ಕ.ಲೋಕಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ ಅಭ್ಯರ್ಥಿ ಕ್ಯಾ.ಬೃಜೇಶ್ ಚೌಟ ಗೆಲುವು ಮತ್ತು ದೇಶದಲ್ಲಿ ಎನ್ ಡಿಎ ಹೆಚ್ಚು ಸ್ಥಾನವನ್ನು ಪಡೆದ ಕಾರಣ ಬೆಟ್ಟಂಪಾಡಿ ಹಾಗೂ ನಿಡ್ಪಳ್ಳಿ ಗ್ರಾಮದ  ಬಿ.ಜೆ.ಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು  ಪಟಾಕಿ ಸಿಡಿಸಿ ಸಂಭ್ರಮಾಚರಣೆ ಆಚರಿಸಿದರು.

 ಅಲ್ಲದೆ ಬೆಟ್ಟಂಪಾಡಿ ಗ್ರಾಮದ ಮಿತ್ತಡ್ಕದಿಂದ ಸಂಟ್ಯಾರ್ ವರೆಗೆ ಹೋಗಿ ತಿರುಗಿ ಬಂದು ನಿಡ್ಪಳ್ಳಿ ಗ್ರಾಮದಲ್ಲಿ ವಾಹನಗಳಲ್ಲಿ ಮೆರವಣಿಗೆ ಮೂಲಕ ಸಾಗಿ ನರೇಂದ್ರ ಮೋದಿ ಹಾಗೂ ದ.ಕ ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸಿದ ಕ್ಯಾ ಬ್ರಿಜೇಶ್ ಚೌಟರವರಿಗೆ ಜೈಕಾರ ಹಾಕಿ ಸಂಭ್ರಮಿಸಿದರು.

LEAVE A REPLY

Please enter your comment!
Please enter your name here