ಸಜಂಕಾಡಿ ಸ.ಹಿ.ಪ್ರಾ.ಶಾಲೆಯಲ್ಲಿ ಪರಿಸರ ದಿನಾಚರಣೆ

0

ಬಡಗನ್ನೂರು: ಸಜಂಕಾಡಿ ಸ.ಹಿ.ಪ್ತಾ ಶಾಲೆಯಲ್ಲಿ”ಮನೆಗೊಂದು ಗಿಡ ” ಪರಿಸರ ಪ್ರೀತಿ ಹಂಚುವ ವಿಶಿಷ್ಟ ಪರಿಕಲ್ಪನೆ  ಮೂಲಕ ಪರಿಸರ ದಿನಾಚರಣೆಯನ್ನು ಜೂ 5 ರಂದು ಆಚರಿಸಲಾಯಿತು. ಶಾಲಾಭಿವೃದ್ದಿ  ಸಮಿತಿ ಅಧ್ಯಕ್ಷೆ   ಯಶೋಧ ವಿಶ್ವ ಪರಿಸರ ದಿನದ ಅಂಗವಾಗಿ ಶಾಲಾ ಆವರಣದಲ್ಲಿ ಹಣ್ಣಿನ‌ ಗಿಡವೊಂದನ್ನು ನೆಡುವ ಮೂಲಕ ಚಾಲನೆ ನೀಡಿದರು

ಮುಖ್ಯ ಅತಿಥಿ ಬಡಗನ್ನೂರು ಗ್ರಾಮ ಪಂಚಾಯತ್ ಸದಸ್ಯ ರವಿರಾಜ ರೈ  ಸಜಂಕಾಡಿ  ‘ಮನೆಗೊಂದು ಗಿಡ ‘ಕಾರ್ಯಾಕ್ರಮಕ್ಕೆ ಚಾಲನೆ ನೀಡಿ  ಜಾಗತಿಕ ತಾಪಮಾನ ಏರುತ್ತಿರುವ  ಈ ಸಂದರ್ಭದಲ್ಲಿ ಇಂತಹ ವಿನೂತನ ಕಾರ್ಯಕ್ರಮ ಗಳ ಮೂಲಕ ಸಣ್ಣ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಪರಿಸರದ ಬಗ್ಗೆ ಪ್ರೀತಿ ಹುಟ್ಟುವಂತೆ ಮಾಡುತ್ತಿರುವುದು ನಿಜವಾಗಿಯೂ ಶ್ಲಾಘನೀಯ ಕೆಲಸ ಎಂದರು .ಬಡಗನ್ನೂರು ಗ್ರಾಮ ಪಂಚಾಯತ್ ಸದಸ್ಯ ಕುಮಾರ್ ಕೆ ಅಂಬಟೆಮೂಲೆ,ಪ್ರಗತಿ ಪರ ಕೃಷಿಕ ಕಾಂತಪ್ಪ ಪೂಜಾರಿ ಮಡತ್ತನ ಮೂಲೆ  ಶುಭಹಾರೈಸಿದರು .

ಪರಿಸರ ದಿನದ ಪ್ರಯುಕ್ತ ಮಕ್ಕಳಲ್ಲಿ  ಗಿಡವನ್ನು ನೆಟ್ಟು ಬೆಳೆಸುವ ಆಸಕ್ತಿ ಮೂಡಿಸಲು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಮಂಗಳೂರು -ಪುತ್ತೂರು ಘಟಕ ,ಅರಣ್ಯ ಇಲಾಖೆ ಪುತ್ತೂರು ವಲಯ ದ ಸಹಕಾರದಲ್ಲಿ ರಂಬೂಟಾನ್ ,ಬಟರ್ ಪ್ರೂಟ್ ,ಪುನರ್ಪುಳಿ ,ಸಂಪಿಗೆ ,ಬಿಲ್ಪಪತ್ರೆ,ನೇರಳೆ  ಸೇರಿದಂತೆ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ಪ್ರತಿ ಮಗುವಿಗೂ ನೀಡುವ ಮೂಲಕ “ಮನೆಗೊಂದು ಗಿಡ ” ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಿತು

*ಏನಿದು “ಮನೆಗೊಂದು ಗಿಡ ” ಪರಿಕಲ್ಪನೆ ?
ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬ ಮಾತಿನಂತೆ ಎಳೆಯ ಮಕ್ಕಳಲ್ಲಿ ಪರಿಸರ ಪ್ರೀತಿ ಬೆಳೆಸುವ ನಿಟ್ಟಿನಲ್ಲಿ ಪ್ರತಿ ಮನೆಗೊಂದರಂತೆ  ಮಗುವಿನ ಕೈಯಲ್ಲಿ ನೀಡಿ ,ಮಗು ಆ ಗಿಡವನ್ನು ತನ್ನ ಮನೆಯ ಸುತ್ತ ನೆಟ್ಟು ಪೋಷಿಸುವ ಮೂಲಕ ಪರಿಸರ ಪ್ರೀತಿ ಹುಟ್ಟಿಕೊಳ್ಳುವ ಸಣ್ಣ ಪ್ರಯತ್ನ ಇದಾಗಿದೆ .

ಪ್ರಭಾರ ಮುಖ್ಯಗುರು  ಸುಮಲತಾ ಪಿ.ಕೆ  ಕಾರ್ಯಕ್ರಮ ನಿರೂಪಿಸಿದರು .ಶಿಕ್ಷಕ ಗಣೇಶ ನಾಯಕ್ ಪುತ್ತೂರು ಸಹಕರಿಸಿದರು .ಶಿಕ್ಷಕಿ ಶಶಿಕಲಾ ಸೇರಿದಂತೆ ಶಾಲಾಭಿವೃದ್ಧಿ ಸಮಿತಿ ಸದಸ್ಯರೂ ,ಪೋಷಕರು ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here