ಸ್ಟೇಟಸ್ ನಲ್ಲಿ ಅವಮಾನಕರವಾಗಿ ಸ್ವಾಮೀಜಿಯ ಚಿತ್ರ – ಹಿಂದೂ ಸಮಾಜದ ಕ್ಷಮೆಯಾಚಿಸಿದ ಬಳಿಕ ಪ್ರಕರಣ ಸುಖಾಂತ್ಯ

0

ಕಡಬ: ಅನ್ವರ್ ವೆರೈಟಿ ಎಂಬಾತ ಹಿಂದೂ ಸ್ವಾಮೀಜಿಯ ಭಾವಚಿತ್ರವನ್ನು ಅವಮಾನಕರವಾಗಿ ಚಿತ್ರಿಸಿ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡ ಘಟನೆ ಕಡಬದಲ್ಲಿ ನಡೆದಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಹಿಂದೂ ಸಮಾಜ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಹಿಂದೂ ಸಮಾಜದ ಆಕ್ರೋಶಕ್ಕೆ ಮಣಿದ ಅನ್ವರ್ ವೆರೈಟಿ ಕಡಬ ದುರ್ಗಾಂಬಿಕಾ ಅಮ್ಮನವರ ದೇವಾಲಯಕ್ಕೆ ಬಂದು ಸಮಸ್ತ ಹಿಂದೂ ಸಮಾಜದ ಕ್ಷಮೆಯಾಚಿಸಿದ್ದಾನೆ. ಇನ್ನು ಮುಂದೆ ಹಿಂದೂ ಸಮಾಜದ ಬಗ್ಗೆ ಅಥವಾ ಹಿಂದೂ ಧಾರ್ಮಿಕ ವಿಷಯಗಳಿಗೆ ಸಂಬಂಧಪಟ್ಟ ಯಾವುದೇ ವಿಷಯಗಳ ಬಗ್ಗೆ ಅಪ್ಪಿ ತಪ್ಪಿಯು ಅವಹೇಳನಕಾರಿಯಾಗಿ ಅಥವಾ ಅವಮಾನಕರವಾಗಿ ಚಿತ್ರಿಸಿ ಹಿಂದೂ ಸಮಾಜಕ್ಕೆ ದಕ್ಕೆ ತರುವ ಕೆಲಸ ಮಾಡುವುದಿಲ್ಲ ಎಂದು ತಪ್ಪೊಪ್ಪಿಕೊಂಡಿದ್ದು, ಪ್ರಕರಣ ಸುಖಾಂತ್ಯಗೊಂಡಿದೆ.

LEAVE A REPLY

Please enter your comment!
Please enter your name here