ಬಪ್ಪಳಿಗೆ: ಮರ ಬಿದ್ದು 8 ವಿದ್ಯುತ್ ಕಂಬಗಳಿಗೆ ಹಾನಿ – ಸ್ಥಳಕ್ಕೆ ಶಾಸಕರ ಭೇಟಿ – ಅಪಾಯಕಾರಿ‌ ಮರಗಳ ತೆರವಿಗೆ ಸೂಚನೆ

0

ಪುತ್ತೂರು: ಭಾನುವಾರ ಸಂಜೆ ಬಪ್ಪಳಿಗೆಯಲ್ಲಿ ರಸ್ತೆ ಬದಿಯ ಭಾರೀ ಗಾತ್ರದ ಮರವೊಂದು ಗಾಳಿಗೆ ಮುರಿದು ಬಿದ್ದು ಎಂಟು ವಿದ್ಯುತ್ ಕಂಬಗಳು ಮುರಿದಿದೆ.‌ ಭಾನುವಾರ ಆದ ಕಾರಣ ವಾಹನ ಸಂಚಾರ ಕಡಿಮೆ ಇದ್ದು, ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ. ಘಟನಾ ಸ್ಥಳಕ್ಕೆ ಶಾಸಕ ಅಶೋಕ್ ರೈ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ‌ ಮೆಸ್ಕಾಂ ಮತ್ತು ಅರಣ್ಯ ಅಧಿಕಾರಿಗಳನ್ನು ಕರೆಸಿದ ಶಾಸಕರು ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವು ಮಾಡಬೇಕು ಮತ್ತು ವಿದ್ಯುತ್ ಕಂಬಗಳನ್ನು ರಸ್ತೆ ಬದಿಯಲ್ಲೇ ಹಾಕದೆ ಸ್ವಲ್ಪ ದೂರದಲ್ಲಿ ಹಾಕುವಂತೆ ಸೂಚಿಸಿದರು.

ರಸ್ತೆ ಅಗಲೀಕರಣ ಮಾಡಿ ಸ್ಥಳೀಯರ ಮನವಿ
ಈ ರಸ್ತೆ ಅಗಲವಿಲ್ಲ, ಅಗಲೀಕರಣ ಮಾಡಬೇಕು. ದಿನಂಪ್ರತಿ‌ ನೂರಾರು ವಾಹನಗಳು ಇಲ್ಲಿ ಸಂಚರಿಸುತ್ತಿದೆ, ಮಳೆ ನೀರು ಹರಿದು ಹೋಗಲು ಚರಂಡಿಯೂ ಇಲ್ಲ. ಈ ಭಾಗದ ನಗರಸಭಾ ಸದಸ್ಯರು ಇಲ್ಲಿನ ಸಮಸ್ಯೆಯ ಬಗ್ಗೆ ಮಾತನಾಡುವುದೇ ಇಲ್ಲ. ಈ ಭಾಗಕ್ಕೆ ಬರುವುದೇ ಇಲ್ಲ ಎಂದು ಆರೋಪಿಸಿದರು. ರಸ್ತೆಯನ್ನು ಅಗಲೀಕರಣ ಮಾಡಿಸುವ ಬಗ್ಗೆ ಶಾಸಕರು‌ ಭರವಸೆ ನೀಡಿದರು.

LEAVE A REPLY

Please enter your comment!
Please enter your name here