ಪುಣಚ: ಸತತ ಮೂರನೇ ಬಾರಿಗೆ ದೇಶದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರು ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆ ಹಾಗೂ ದ.ಕ.ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಹುಮತಗಳಿಂದ ಗೆಲುವು ಸಾಧಿಸಿದ ಕ್ಯಾ.ಬ್ರಿಜೇಶ್ ಚೌಟರು ನೂತನ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪುಣಚ ಬಿಜೆಪಿ ಕಾರ್ಯಕರ್ತರು ಪರಿಯಾಲ್ತಡ್ಕದಲ್ಲಿ ಜೂ.9ರಂದು ಸಂಭ್ರಮಾಚರಣೆ ನಡೆಸಿ,ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
![](https://puttur.suddinews.com/wp-content/uploads/2024/06/WhatsApp-Image-2024-06-09-at-8.10.38-PM.jpeg)
ಬಿಜೆಪಿ ಮಂಡಲ ವ್ಯಾಪಾರ ಪ್ರಕೋಷ್ಟದ ಸಂಚಾಲಕ ಪ್ರೀತಮ್ ಪೂಂಜ ಅಗ್ರಾಳ, ಪುಣಚ 2 ನೇ ಶಕ್ತಿ ಕೇಂದ್ರದ ಅಧ್ಯಕ್ಷ ಉದಯ್ ಭಾಸ್ಕರ್, ಮಹಾಶಕ್ತಿ ಕೇಂದ್ರದ ಸದಸ್ಯ ಹರೀಶ್ ಪೂಜಾರಿ, ಪುಣಚ ಗ್ರಾ.ಪಂ ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬೈಲುಗುತ್ತು, ಸದಸ್ಯರು, ಮಾಜಿ ಗ್ರಾ.ಪ್ರಂ.ಅಧ್ಯಕ್ಷ ರಾಮಕೃಷ್ಣ ಬಿ, ಸಂಘ ಸಂಸ್ಥೆಗಳ ಮುಖಂಡರು, ಹಾಗೂ ಹಲವಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.