ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಗೆ ಕರ್ಣಾಟಕ ಬ್ಯಾಂಕ್ ನಿಂದ ನೂತನ ಶಾಲಾ ಬಸ್ಸಿನ ಕೊಡುಗೆ

0

ಪುತ್ತೂರು  : ಕರ್ಣಾಟಕ ಬ್ಯಾಂಕ್ ಪ್ರಧಾನ ಕಛೇರಿ ಮಂಗಳೂರು ಇದರ ನೇತೃತ್ವದಲ್ಲಿ ನರಿಮೊಗರಿನ ಸಾಂದೀಪನಿ ವಿದ್ಯಾಸಂಸ್ಥೆಗೆ ಭಾರತ್ ಬೆಂಜ್ ಕಂಪೆನಿಯ ಶಾಲಾ ಬಸ್ಸನ್ನು ಕೊಡುಗೆಯಾಗಿ  ನೀಡಲಾಯಿತು.

 ಈ ಸಂದರ್ಭದಲ್ಲಿ ಬ್ಯಾಂಕ್ ನ ಮುಖ್ಯ ವ್ಯವಸ್ಥಾಪಕ ರಾಜ.ಬಿ.ಎಸ್, ನಿರ್ಮಲ ಕುಮಾರ್,ಸಾಂಡ್ರಾ..ಎಂ.ಲೊರೇನಾ,  ನಿರಂಜನ್ ಕುಮಾರ್, ಉಪ ವ್ಯವಸ್ಥಾಪಕ  ವಸಂತ ಆರ್. ಹೇರಳೆ, ಸಹಾಯಕ ವ್ಯವಸ್ಥಾಪಕ ಮಾಧವ ನಾವಡ, ಮುಖ್ಯ ವ್ಯವಸ್ಥಾಪಕರಾದ  ಶ್ರೀಹರಿ.ಪಿ ಮತ್ತು ವ್ಯವಸ್ಥಾಪಕ ಶ್ರೀಶ ಇವರ ಉಪಸ್ಥಿತಿಯಲ್ಲಿ ಸಾಂದೀಪನಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಜಯರಾಮ ಕೆದಿಲಾಯ ಇವರಿಗೆ ಶಾಲಾ ಬಸ್ಸನ್ನು  ಹಸ್ತಾಂತರ ಮಾಡಿದರು. 

ಈ ಸಂದರ್ಭದಲ್ಲಿ ಸಾಂದೀಪನಿ ವಿದ್ಯಾಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು, ಕಾರ್ಯದರ್ಶಿ ಶ್ರೀ ಕೃಷ್ಣಪ್ರಸಾದ್ ಕೆದಿಲಾಯ, ಜಯಗುರು ಆಚಾರ್ ಹಿಂದಾರು,  ದೇರ್ಕಜೆ ವೆಂಕಟರಮಣ ಭಟ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here