ಉಪ್ಪಿನಂಗಡಿ:ಗೋ ಹತ್ಯೆ ತಡೆಗಟ್ಟಲು ಮನವಿ

0

ಉಪ್ಪಿನಂಗಡಿ: ಮುಂಬರುವ ಬಕ್ರಿದ್ ಹಬ್ಬದ ಸಮಯದಲ್ಲಿ ಗೋ ಹತ್ಯೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಹಾಗೂ ದಿನದ ಎಲ್ಲಾ ಸಮಯದಲ್ಲಿಯೂ ತಪಾಸಣಾ ಪ್ರಕ್ರಿಯೆಯನ್ನು ಬಿಗುಗೊಳಿಸಬೇಕೆಂದು ಅಗ್ರಹಿಸಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಪೊಲೀಸ್ ಇಲಾಖೆಗೆ ಉಪ್ಪಿನಂಗಡಿಯಲ್ಲಿಂದು ಮನವಿ ಸಲ್ಲಿಸಲಾಯಿತು.


ನಿಯೋಗದಲ್ಲಿ ಮುಂದಾಳುಗಳಾದ ಮಹೇಶ್ ಬಜತ್ತೂರು, ಸಂತೋಷ್ ಅಡೆಕ್ಕಲ್, ರಾಜಶೇಖರ್ ಕರಾಯ, ಸಂತೋಷ್ ಕರ್ಲಾಪು, ಕಿಶೋರ್ ನೀರಕಟ್ಟೆ, ಮಂಜುನಾಥ ಕಂಗಿನಾರು ಬೆಟ್ಟು, ಪವನ್ ದುರ್ಗಾಗಿರಿ, ಚೇತನ್ ಬಂಡಾಡಿ, ಹಿತೇಶ್ ಕೊಳಕ್ಕೆ, ತೇಜಸ್ ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here