ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಸುಳ್ಯ ಮಂಡಲ ಬಿ.ಜೆ.ಪಿಯಿಂದ ರಸ್ತೆ ತಡೆ- ಪ್ರತಿಭಟನೆ

0

ಪುತ್ತೂರು: ರಾಜ್ಯ ಸರಕಾರದ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯ ವಿರುದ್ಧ ಜೂ.20ರಂದು ಸುಳ್ಯ ಮಂಡಲದ ಕೇಂದ್ರಗಳಲ್ಲಿ ರಸ್ತೆ ತಡೆ ನಡೆಸಲು ರಾಜ್ಯ ಬಿಜೆಪಿ ಸಮಿತಿಯು ಕರೆ ನೀಡಿದ್ದು ಅದರಂತೆ ಕಡಬ ಪೇಟೆಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ಜಿಲ್ಲಾ ಬಿ.ಜೆ.ಪಿ ಉಪಾಧ್ಯಕ್ಷ ರಾಕೇಶ್ ರೈ ಕಡೆಂಜಿ ಮಂಡಲಧ್ಯಕ್ಷ ವೆಂಕಟ್ ವಳಲಂಬೆ,ಪ್ರದಾನ ಕಾರ್ಯದರ್ಶಿ ವಿನಯಕಂದಡ್ಕ,ಪ್ರ ದೀಪ್ ರೈ ಮನವಳಿಕೆ ಸೇರಿದಂತೆ ಬಿ.ಜೆ.ಪಿ ಜಿಲ್ಲಾ,ಮಂಡಲ,ಮಹಾಶಕ್ತಿ ಕೇಂದ್ರ, ಶಕ್ತಿಕೇಂದ್ರ ,ಬೂತ್ ಸಮಿತಿ ಅಧ್ಯಕ್ಷರು ,ಕಾರ್ಯದರ್ಶಿ, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here