ಜೂ.30 ಸವಣೂರಿನಲ್ಲಿ ಇಸ್ಮಾಯಿಲ್ ಕಾನಾವುರವರ ಶುಭವಿವಾಹದ ಅಂಗವಾಗಿ ರಕ್ತದಾನ ಶಿಬಿರ

0

ಪುತ್ತೂರು: ಅಲ್ ಅನ್ಸಾರ್ ಚಾರಿಟೀಬಲ್ ಟ್ರಸ್ಟ್ ಸವಣೂರು ಇವರ ಸಾರಥ್ಯದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಇವರ ಸಹಯೋಗದೊಂದಿಗೆ ಸಾಮಾಜಿಕ, ರಾಜಕೀಯ ಮುಂದಾಳು ಇಸ್ಮಾಯಿಲ್ ಕಾನಾವುರವರ ಶುಭವಿವಾಹದ ಪ್ರಯುಕ್ತ ಜೂ. 30ರಂದು ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30ರ ತನಕ ಸವಣೂರು ಸೊಂಪಾಡಿ ಕಾನಾವು ಫಾರ್ಮ್ಸ್‌ನಲ್ಲಿ ರಕ್ತದಾನ ಶಿಬಿರ ಜರಗಲಿದೆ. ಸಮಾರಂಭದಲ್ಲಿ ಪಣೆಮಜಲು ಆರ್‌ಜೆಎಮ್‌ನ ಖತೀಬ್‌ರಾದ ಪವಾಝ್ ಫೈಝೀರವರು ದುವಾ ನೇರವೇರಿಸಲಿದ್ದಾರೆ. ಮಧುಮೇಹ ತಜ್ಞ ಡಾ.ನಝೀರ್ ಅಹ್ಮದ್ ಪುತ್ತೂರುರವರು ರಕ್ತ ದಾನ ಶಿಬಿರದ ಉದ್ಘಾಟನೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಸವಣೂರು ಅಲ್ ಅನ್ಸಾರ್ ಚಾರಿಟೀಬಲ್ ಟ್ರಸ್ಟ್‌ನ ಅಧ್ಯಕ್ಷ ಅಬ್ದುಲ್ ರಝಾಕ್ ಎಸ್.ಆರ್‌ರವರು ವಹಿಸಲಿದ್ದಾರೆ ಎಂದು ಸವಣೂರು ಅಲ್ ಅನ್ಸಾರ್ ಚಾರಿಟೀಬಲ್ ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here