ಕೋಡಿಂಬಾಡಿ ವನಿತಾ ಸಮಾಜದ ಪದಾಧಿಕಾರಿಗಳ ಪದಗ್ರಹಣ

0

ಪುತ್ತೂರು: ಕೋಡಿಂಬಾಡಿಯ ವನಿತಾ ಸಮಾಜದ 2024-25ರ ಸಾಲಿನ ಪದಾಧಿಕಾರಿಗಳ ಪದಸ್ವೀಕಾರ ಕಾರ್ಯಕ್ರಮ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ನಿಕಟಪೂರ್ವ ಅಧ್ಯಕ್ಷೆ ಧರ್ಮಾವತಿ ರಾಘವೇಂದ್ರ ಆಚಾರ್ಯ ಸೇಡಿಯಾಪುರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಅಶೋಕ್ ಪೂಜಾರಿ ಕಾಂತಳಿಕೆ ಅವರು ಶುಭ ಹಾರೈಸಿದರು.

ನಂತರ ಕಡತ ಹಸ್ತಾಂತರಿಸುವ ಮೂಲಕ ಸಾಂಕೇತಿಕವಾಗಿ ಪದಸ್ವೀಕಾರ ಸಮಾರಂಭ ನಡೆಸಲಾಯಿತು. ನೂತನ ಅಧ್ಯಕ್ಷೆ ರಶ್ಮಿ ನಿರಂಜನ್ ರೈ ಮಠಂತಬೆಟ್ಟು ಅವರು ಮುಂದಿನ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಕೋರಿದರು. ನೂತನ ಕಾರ್ಯದರ್ಶಿ ಪವಿತ್ರ ಸುರೇಶ್ ಶೆಟ್ಟಿ ಬರಮೇಲು, ಉಪಾಧ್ಯಕ್ಷೆ ರಾಧಿಕಾ ರಮೇಶ್ ಸಾಮಂತ್ ನೆಕ್ಕರಾಜೆ, ಜೊತೆ ಕಾರ್ಯದರ್ಶಿ ಹರಿಣಾಕ್ಷಿ ರಮೇಶ್ ಭಂಡಾರಿ ಕೈಪ, ಕೋಶಾಧಿಕಾರಿ ಕುಸುಮ ವಿಜಯ ರೈ ಸರೋಳಿ ಮತ್ತು ಗೌರವ ಸಲಹೆಗಾರರಾದ ದೇಜಮ್ಮ ಗುಣಪಾಲ ಹೆಗ್ಡೆ ಮಿತ್ತಳಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸರೋಜಿನಿ ಜಯರಾಮ ಕಾಪು ಅವರು ಪ್ರಾರ್ಥಿಸಿದರು. ತಾ.ಪಂ. ಮಾಜಿ ಸದಸ್ಯೆ ಲೀಲಾವತಿ ಲಕ್ಷಣ ಗೌಡ ಮೇಲಿನಹಿತ್ಲು ಸ್ವಾಗತಿಸಿದರು. ಶಾರದಾ ಚಂದ್ರಹಾಸ ರೈ ಸರೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಕಟಪೂರ್ವ ಜೊತೆ ಕಾರ್ಯದರ್ಶಿ ರಾಧಿಕಾ ಆರ್. ಸಾಮಂತ್ ವರದಿ ವಾಚಿಸಿದರು. ಜೊತೆ ಕಾರ್ಯದರ್ಶಿ ಹರಿಣಾಕ್ಷಿ ರಮೇಶ್ ಭಂಡಾರಿ ಕೈಪ ವಂದಿಸಿದರು. ವಿನುತ ಜಯಪ್ರಕಾಶ್ ಬದಿನಾರು ಕಾರ್ಯಕ್ರಮ ನಿರೂಪಿಸಿದರು. ಸವಿತಾ ವಿಕ್ರಂ ಅಂತರ, ಸುಮಲತಾ ಬಾಬು ಗೌಡ ಭಂಡಾರದಮನೆ, ಯಮುನಾ ಡೆಕ್ಕಾಜೆ, ವಿಜಯಲಕ್ಷ್ಮಿ ರಮೇಶ್ ನಾಯಕ್ ನಿಡ್ಯ, ರೇಖಾ ಜಯರಾಮ್ ರೈ ಕೆದಿಕಂಡೆ, ಸುಲೋಚನಾ ಮತ್ತು ಸಂಧ್ಯಾ ರಾಮಚಂದ್ರ ಗೌಡ ಅತಿಥಿಗಳನ್ನು ಗೌರವಿಸಿದರು. ರಶ್ಮಿ ನಿರಂಜನ್ ರೈ ಉಪಹಾರದ ವ್ಯವಸ್ಥೆ ಮಾಡಿದ್ದರು.

LEAVE A REPLY

Please enter your comment!
Please enter your name here