ಕೊಕ್ಕಡ: ಮೊಬೈಲ್ ಆ್ಯಪ್‌ನಲ್ಲಿ ಸಂದೇಶ ಕಳಿಸಿ 1 ಲಕ್ಷ ರೂ.ವಂಚನೆ-ದೂರು ದಾಖಲು

0

ನೆಲ್ಯಾಡಿ: ಕೊಕ್ಕಡದ ಉದ್ಯಮಿಯೊಬ್ಬರಿಗೆ ವಾಟ್ಸಪ್ ಆ್ಯಪ್‌ ನಲ್ಲಿ ಯೂನಿಯನ್ ಬ್ಯಾಂಕ್ ಎಂಬ ಮೆಸೇಜ್ ಲಿಂಕ್ ಕಳಿಸಿ ಲಕ್ಷಾಂತರ ರೂ.ವಂಚಿಸಿರುವ ಪ್ರಕರಣವೊಂದು ಜೂ.30ರಂದು ನಡೆದಿದೆ.


ಅಪರಿಚಿತ ವ್ಯಕ್ತಿಯೋರ್ವರು ಕೊಕ್ಕಡ ಗ್ರಾಮದ ಬಡೆಕೈಲ್ ನಿವಾಸಿ, ಉದ್ಯಮಿ ಶ್ರೀನಾಥ್ ಅವರ ಮೊಬೈಲ್‌ಗೆ ಯೂನಿಯನ್ ಬ್ಯಾಂಕ್ ಹೆಸರಿನಲ್ಲಿ ಡೌನ್‌ಲೋಡ್ ಮಾಡುವಂತೆ ಲಿಂಕ್ ಇರುವ ಮೆಸೇಜ್ ಬಂದಿದ್ದು ಲಿಂಕ್ ಓಪನ್ ಆದ ತಕ್ಷಣ ಓಟಿಪಿ ಬಂದು ಅದು ಆಟೋ ಜನರೇಟ್ ಆಗಿ ಅವರ ಖಾತೆಯಲ್ಲಿದ್ದ ರೂ.1.11 ಲಕ್ಷದಲ್ಲಿ 1 ಲಕ್ಷ ರೂ. ಡ್ರಾ ಆಗಿದೆ. ಈ ಬಗ್ಗೆ ಅವರು ಸೈಬರ್ ಕ್ರೈಂ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here