ಬೀದರ್ ಶಾಸಕ ಹಾಗೂ ಮಾಜಿ ಪಶುಸಂಗೋಪನಾ ಸಚಿವ ಪ್ರಭು ಬಿ ಚೌಹಾನ್ ಹನುಮಗಿರಿಗೆ ಭೇಟಿ

0

ಈಶ್ವರಮಂಗಲ: ಬೀದರ್ ಶಾಸಕ ಹಾಗೂ ಮಾಜಿ ಪಶುಸಂಗೋಪನಾ ಸಚಿವರಾಗಿರುವ ಪ್ರಭು ಬಿ ಚೌಹಾನ್ ಶ್ರೀ ಕ್ಷೇತ್ರ ಹನುಮಗಿರಿಗೆ ಭೇಟಿ ನೀಡಿ ಪಂಚಮುಖಿ ಆಂಜನೇಯ ಸ್ವಾಮಿಗೆ ಹಾಗೂ ಕೋದಂಡರಾಮನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಬಳಿಕ ಶ್ರೀ ಅಮರಜ್ಯೋತಿ ಭಾರತೀ ಮಂದಿರ ಅಮರಗಿರಿ ಗೆ ಭೇಟಿ ನೀಡಿ ಹುತಾತ್ಮ ಯೋಧರಿಗೆ ಹಾಗೂ ಭಾರತ ಮಾತೆಗೆ ನಮಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಧರ್ಮದರ್ಶಿಗಳಾದ ನನ್ಯ ಅಚ್ಚುತ್ತ ಮೂಡೆತ್ತಾಯ, ಧರ್ಮದರ್ಶಿಗಳಾದ ಶಿವರಾಂ ಪಿ, ನಾಗರಾಜ್ ನಡುವಡ್ಕ, ಬಿಜೆಪಿ ಕಾರ್ಯಕರ್ತರಾದ ದೀಪಕ್, ಪ್ರಫುಲ್ಲ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here