ಕೂರ‌ತಂಙಳ್ ನಿಧನಕ್ಕೆ ಕಾವು ಹೇಮನಾಥ ಶೆಟ್ಟಿ ಸಂತಾಪ

0

ಪುತ್ತೂರು: ಉಳ್ಳಾಲ ಖಾಝಿ ಖ್ಯಾತ ಮುಸ್ಲಿಂ ಧರ್ಮಗುರುಗಳಾಗಿರುವ ಕೂರ ತಂಙಳ್ ಎಂದೇ ಚಿರಪರಿಚಿತರಾಗಿರುವ ಕೂರತ್ ಸಾದಾತ್ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ರವರ ನಿಧನಕ್ಕೆ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


ಉಳ್ಳಾಲ ಖಾಝಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಆಧ್ಯಾತ್ಮಿಕ ಪಂಡಿತರಾಗಿ ಜನರ ನೋವು ,ಸಂಕಷ್ಟಕ್ಕೆ ಆಧ್ಯಾತ್ಮಿಕ ಪರಿಹಾರ ನೀಡುವ ಮೂಲಕ ಸಮಾಜದ ಎಲ್ಲಾ ವರ್ಗದ ಜನರ ಪ್ರೀತಿಯ ಗುರುಗಳಾಗಿ ಬಾಳಿದ್ದರು. ಇವರ ಅಗಲುವಿಕೆ‌ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅಪಾರ ಮನ್ನಣೆಯನ್ನು ಹೊಂದಿದ್ದ ಇವರು ಜಾತಿ, ಮತ, ಧರ್ಮ‌ಬೇಧವಿಲ್ಲದೆ ಎಲ್ಲರಿಗೂ ತಮ್ಮ ದಿವ್ಯ ಶಕ್ತಿಯಿಂದ ಆಶೀರ್ವಾದ ನೀಡುತ್ತಿದ್ದರು. ಇವರ ಅಗಲುವಿಕೆ ಸಮಾಜಕ್ಕೆ ಅಪಾರ‌ ನಷ್ಟವಾಗಿದೆ ಎಂದು ತಮ್ಮ‌ ಸಂತಾಪದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here