ಪಾಲ್ತಾಡಿ: ಪಲ್ಲತ್ತಡ್ಕದಲ್ಲಿ ಸಮೃದ್ಧಿ ಸಂಜೀವಿನಿ ಸಂಘ ಉದ್ಘಾಟನೆ

0

ಸವಣೂರು : ಶ್ರೀ ರಾಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ) ಸವಣೂರು ಇದರ ಆಶ್ರಯದಲ್ಲಿ ಪಾಲ್ತಾಡಿ ಗ್ರಾಮದ ಪಲ್ಲತ್ತಡ್ಕದಲ್ಲಿ ಸಮೃದ್ಧಿ ಸಂಜೀವಿನಿ ಸಂಘದ ಉದ್ಘಾಟನೆ ನಡೆಯಿತು.

ಬಾಲಕೃಷ್ಣ ಗೌಡ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಶ್ರೀ ರಾಮ ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾದ ಗೀತಾ ಜಿ.ಎಸ್ ಅವರು ಸಂಜೀವಿನಿ, ರೈತ ಸಂತೆ, ಒಕ್ಕೂಟದ ಬಗ್ಗೆ ಮಾಹಿತಿ ನೀಡಿದರು. ಕೃಷಿ ಸಖಿ ಜಯಂತಿ ಅವರು ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಎಲ್.ಸಿ.ಆರ್.ಪಿ. ಉಷಾ ಸ್ವಾಗತಿಸಿ. ಪಶು ಸಖಿ ಹೇಮಲತಾ ವಂದಿಸಿದರು. ಒಕ್ಕೂಟದ ಜತೆ ಕಾರ್ಯದರ್ಶಿ ಸುಶ್ಮಿತಾ, ಸಂಘದ ಸದಸ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here