ಬಡಗನ್ನೂರುಃ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ

0

ಅಧ್ಯಕ್ಷರಾಗಿ ಜನಾರ್ದನ ಪೂಜಾರಿ ಪದಡ್ಕ,ಕಾರ್ಯದರ್ಶಿ ಸುರೇಶ್ ರೈ ಪಳ್ಳತ್ತಾರು ಆಯ್ಕೆ

ಬಡಗನ್ನೂರುಃ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಪ್ರತಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನಾ ಸಭೆಯು ಜು. 7 ರಂದು ದೇವಸ್ಥಾನ ಸಭಾಂಗಣದಲ್ಲಿ ನಡೆಯಿತು.

ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಜನಾರ್ದನ ಪೂಜಾರಿ ಪದಡ್ಕ,  ಕಾರ್ಯದರ್ಶಿ ಸುರೇಶ್ ರೈ ಪಳ್ಳತ್ತಾರು  ರವರನ್ನು ಆಯ್ಕೆ ಮಾಡಲಾಯಿತು.ಗೌರವಾಧ್ಯಕ್ಷರಾಗಿ  ಸತೀಶ್ ರೈ ಕಟಾವು, ಉಪಾಧ್ಯಕ್ಷರಾಗಿ ಗಂಗಾಧರ ರೈ ಮೇಗಿನಮನೆ,ಕೋಶಾಧಿಕಾರಿಯಾಗಿ  ರಾಜೇಶ್ ರೈ ಮೇಗಿನಮನೆ ಇವರುಗಳನ್ನು ಅಯ್ಕೆ ಮಾಡಲಾಯಿತು.

ಗೌರವ ಸಲಹೆಗಾರರಾಗಿ :ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಮನೋಜ್ ರೈ ಪೇರಾಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು, ಪ್ರಗತಿಪರ ಕೃಷಿಕ ಕೃಷ್ಣ ರೈ ಕುದ್ಕಾಡಿ, ಪಟ್ಟೆ ವಿದ್ಯಾಸಂಸ್ಥೆಗಳ ನಿರ್ದೇಶಕ ಶಿವಪ್ರಸಾದ್ ಭಟ್ ಪಟ್ಟೆ, ಸಿವಿಲ್ ಇಂಜಿನಿಯರ್ ಚಂದ್ರಶೇಖರ ಆಳ್ವ ಗಿರಿಮನೆ,ದೇವಸ್ಥಾನದ ಉತ್ಸವ ಸಮಿತಿ ಮಾಜಿ ಅಧ್ಯಕ್ಷ ರಾಮಣ್ಣಗೌಡ ಬಸವಹಿತ್ತಿಲು, ಉದ್ಯಮಿ ಸುಧಾಕರ ಶೆಟ್ಟಿ ಮಂಗಳಾದೇವಿ, ಹಾಗೂ ಪುರಂದರ ರೈ ಸೇನರೆಮಜಲು ಇವರುಗಳನ್ನು ಆಯ್ಕೆ ಮಾಡಲಾಯಿತು.

ಸಂಚಾಲಕರಾಗಿ:ರಘುರಾಮ ಪಟಾಳಿ ಶರವು, ಲಿಂಗಪ್ಪ ಗೌಡ ಮೋಡಿಕೆ, ಸುಬ್ಬಯ್ಯ ರೈ ಹಲಸಿನಡಿ,  ಉದಯ ಕುಮಾರ್ ಪಡುಮಲೆ,  ಕೃಷ್ಣಪ್ರಸಾದ್ ರೈ ಪಡುಮಲೆ, ಚಂದ್ರಶೇಖರ ಭಂಡಾರಿ ನಲಿಕೆಮಜಲು ಹಾಗೂ ಡಾ|  ರವೀಶ್ ಪಡುಮಲೆ ಇವರುಗಳನ್ನು ಆಯ್ಕೆ ಮಾಡಲಾಯಿತು.

ಸದಸ್ಯರುಗಳಾಗಿ ರಮೇಶ್ ರೈ ಕೊಯಿಲ, ಪ್ರಸನ್ನ ರೈ ಮೇಗಿನಮನೆ, ಪ್ರಕಾಶ್ ರೈ ಕೊಯಿಲ, ರೋಹಿತ್ ಮುಡಿಪಿನಡ್ಕ, ಸುರೇಶ್ ಗೌಡ ಬರೆ, ಉದಯ ಕುಮಾರ್ ಶರವು, ತಿಮ್ಮಪ್ಪ ಪಾಟಾಲಿ ಮೈಂದನಡ್ಕ , ಸೂರಜ್ ರೈ ಮೈಂದನಡ್ಕ, ಪುಷ್ಪರಾಜ್ ಆಳ್ವ ಗಿರಿಮನೆ, ಶಿವಕುಮಾರ್ ಅಂಬಟೆ ಮೂಲೆ, ಸಂಜೀವ ಮಡಿವಾಳ ಅನಿಲೆ, ಪ್ರಣಾಮ್ ರೈ ಕುದ್ಕಾಡಿ, ಸುಧಾಕರ ರೈ ಈಶಮೂಲೆ, ನಾಗರಾಜ್ ಪಟ್ಟೆ, ಕಿರಣ್ ರೈ ಮೈಂದನಡ್ಕ, ಪ್ರಜ್ವಲ್ ಕುದ್ಕಾಡಿ ಮತ್ತು ಕಾರ್ತಿಕ್ ಮೈಂದನಡ್ಕ ಇವರುಗಳನ್ನು ಆಯ್ಕೆ ಮಾಡಲಾಯಿತು. 

LEAVE A REPLY

Please enter your comment!
Please enter your name here